ಮುಂಬೈ ಸರಣಿ ಸ್ಫೋಟ : ಹಿನ್ನೋಟವಲ್ಲ. ಒಂದು “ಮುನ್ನೋಟ”

೧೩ ಜುಲೈ ೨೦೧೧

ಮುಂಬೈ ಮೇಲೆ ಉಗ್ರರ ಸರಣಿ ಬಾಂಬ್ ಧಾಳಿ

ಸತ್ತವರು (ಇಲ್ಲಿಯವರೆಗು) : ೨೧ ಜನ

ಅರ್ಧ ಸತ್ತವರು/ ಮುಕ್ಕಾಲು ಭಾಗ ಸತ್ತವರು (ಇಲ್ಲಿಯವರೆಗೂ) : ೧೪೦ ಜನ

Mumbai serial bomb blasts 2011

ಸರ್ಕಾರಗಳ ನಿರ್ವೀರ್ಯತೆಗೆ ಕೊನೆ ಎಂದು?

ಪಟ್ಟಿ ಮುಂದುವರಿಯುತ್ತದೆ. ನಿರೀಕ್ಷಿಸಿ.

Mumbai serial blasts July 2011

ಬಾಂಬ್ ನ ಭಯಾನಕತೆ. ಚಿತ್ರ ಕೃಪೆ : ಐಬಿಎನ್ ಲೈವ್.ಕಾಮ್

 ಬಾಂಬ್ ಸ್ಫೋಟವಾದಾಗಲೇ ತಕ್ಷಣವೇ ಸತ್ತುಬಿಡೋದೇ ಒಳ್ಳೆಯದು. ಆಮೇಲೆ ಆಸ್ಪತ್ರೆಲಿ ತಿಂಗಳು ಕಾಲ ಇದ್ದು ಸತ್ರೆ ಪತ್ರಿಕೇಲೂ ಸುದ್ದಿಯಾಗಲ್ಲ, ಟೀವಿಲೂ ಸುದ್ದಿಯಾಗಲ್ಲ. ಜನರ ಅನುಕಂಪವೂ ಸಿಗಲ್ಲ. ಎಂಥಾ ಬೇನಾಮಿ, ಬೇವರ್ಸಿ ಸಾವು..! ಸಾಯೋರ್ ಇದ್ರೆ ಬೇಗ ಅಟ್ಲೀಸ್ಟ್ ಬೇಗನಾದ್ರೂ ಸತ್ ಬಿಡ್ಲಿ. ಟೀವಿನಲ್ಲಾದ್ರೂ ಬರುತ್ತೆ. ಇಲ್ಲಾಂದ್ರೆ, ಅವರ ಸಾವಿಗೂ ಬೆಲೆಯಿರಲ್ಲ..! ಜನರ ಜೀವಕ್ಕೆ ಬೆಲೆ ಎಲ್ಲಿದೆ ಹೇಳಿ?

 ಅತಿ ದೊಡ್ಡ ಪ್ರಜಾಪ್ರಭುತ್ವ ನಮ್ಮದೇ. ಬಹುಶಃ ಅತಿ ಕೆಟ್ಟ ಪ್ರಜಾಪ್ರಭುತ್ವ ಮತ್ತು ಅತಿ ಭ್ರಷ್ಟ ರಾಜಕಾರಣಿಗಳು ಇರೋದೂ ನಮ್ ದೇಶದಲ್ಲೇ.

ಈ ಎಲ್ಲದಕ್ಕೂ ಕಾರಣ ಮುಸ್ಲೀಮರನ್ನ ಓಲೈಸುವುದಕ್ಕಾಗಿ ನಮ್ಮ ರಾಜಕಾರಣಿಗಳು ರೂಪಿಸುವ ನೀತಿಗಳು. ಎಲ್ಲ ಮುಸ್ಲೀಮರು ಕೆಟ್ಟವರಲ್ಲ. ಆದರೆ, ಇಂಥವರಿಂದ ಒಳ್ಳೆಯವರ ಸಾಧನೆಗಳೂ ಧರ್ಮದ ಕಾರಣಗಳಿಗಾಗಿ ಮಸುಕಾಗಬಾರದು.

ರಾಜಕೀಯ ಪರಿಣಾಮಗಳು ಏನಾಗಬಹುದು? ಮೋದಿಯ ಹಾದಿ ಸುಗಮವಾಗಬಹುದು

Mumbai terror attack July 2011

ಜೀವಕ್ಕೆ, ಕಣ್ಣೀರಿಗೆ ಬೆಲೆ ಇಲ್ಲವಾ? ಚಿತ್ರಕೃಪೆ : ಐಬಿಎನ್ ಲೈವ್.ಕಾಮ್

. ರಾಹುಲ ಗಾಂಧಿ ಎಂದೂ ಉಗ್ರವಾದದ ವಿರುದ್ಧ ಉಗ್ರವಾಗಿ ಮಾತಾಡಿಲ್ಲ. ಯುವ ಜನರಿಗೆ ರಾಹುಲಗಾಂಧಿಯಂಥಾ ಎಳಸುಗಳಿಗಿಂತ ಗಟ್ಟಿಯಾಗಿ ನಿಲ್ಲುವ ಮೋದಿ ಇಷ್ಟವಾಗಬಹುದು. ಉಗ್ರವಾದವನ್ನ ಮಟ್ಟ ಹಾಕಲಿಕ್ಕೆ ಮೋದಿಯೇ ಸರ್ವಶಕ್ತ ಎಂಬ ಮನೋಭಾವ ಮೂಡಬಹುದು. ಕಾಂಗ್ರೇಸ್ ವಿರೋಧಿ ಅಲೆ ಜೋರಾಗಬಹುದು. ಇವೆಲ್ಲದರ ಮಧ್ಯೆ ಒಂದಿಷ್ಟು ಜನರನ್ನ ಹಿಡಿದು ಇವರೇ ಸಂಚುಗಾರರು ಅಂತ ಪೊಲಿಸರು ನಾಕ್ ದಿವ್ಸ ತಿರ್ಗಾಡ್ಕಂಡ್ ಅಡ್ಡಾಡ್ತಾರೆ. ಆಮೇಲೆ ನೀವೂ ಮರೀತೀರ ಬಾಂಬ್ ಎಲ್ಲಿ ಸ್ಫೋಟ ಆಗಿತ್ತು ಅಂತಾ. ನಾವೂ ಮರೀತೀವಿ. Aishwarya Rai Pregnant photosಮಾಧ್ಯಮಗಳು ನಾಕ್ ದಿವ್ಸ ವರದಿ ಮಾಡ್ತವೆ. ಐದನೇ ದಿವ್ಸಕ್ಕೆ ಯಾನಾ ಗುಪ್ತಾ ಗುಪ್ತಾಂಗಗಳಿಗೆ ಪ್ಯಾಂಟಿ ಹಾಕಿಕೊಂಡು ಬಂದಿದ್ದು ಸುದ್ದಿಯಾಗುತ್ತೆ. ಇಲ್ಲವೇ ಐಶ್ವರ್ಯ ಯಾವ್ ಮಗು ಹಡೀತಾಳೇ ಅನ್ನೊದ್ ಸುದ್ದಿ. ಸರ್ಕಾರಗಳು ಬಾಂಬ್ ಸ್ಫೋಟದಲ್ಲಿ ಮಡಿದವರಿಗೆ, ಅಂಗಾಂಗ ಕಳೆದುಕೊಂಡವರಿಗೆ ಪರಿಹಾರ “ಘೋಷಣೆ “ಮಾಡ್ತವೆ. ಕೊಡಬೇಕು ಅಂತಾ ಏನೂ ರೂಲ್ಸ್ ಇಲ್ಲ.

Yana Gupta pantyless stunt

ಇನ್ನೊಂದ್ ವಾರ ಬಿಟ್ ನ್ಯೂಸ್ ಚಾನಲ್ ಗಳನ್ನ ನೋಡಿ. ಇಂಥಾ ಸುದ್ದಿ ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗದಿದ್ರೆ ಕೇಳಿ.

ಹಿಂಗೇ ಆಗುತ್ತೆ ಅಂತಾ ಕನಸಂತೂ ಬಿದ್ದಿಲ್ಲ. ಎಚ್ಚರವಾಗೇ ಇದ್ದೇನೆ. ಆದರೆ, ಹಿಂದೆ ನಡೆದ ಬಾಂಬುಗಳ ಸದ್ದುಗಳನ್ನ ಕೇಳಿದಾಗಲೆಲ್ಲಾ, ಟಿವಿ ಪತ್ರಿಕೆಗಳನ್ನ, ಹೇತ್ಲಾಂಡಿ ಪ್ರಧಾನಿಯನ್ನ ನೋಡಿದಾಗಲೆಲ್ಲಾ ಇದಕ್ಕಿಂತ ಇನ್ನೇನೂ ಘಟಿಸಲಿಕ್ಕೆ ಉಳಿದಿಲ್ಲ ಅನ್ನಿಸದೇ ಇರುತ್ತದೆಯೇ?

 ಹತಾಶೆ ಬಿಟ್ಟು ಇನ್ನೇನೂ ಹೇಳಕ್ ಉಳಿದಿಲ್ಲ.

ಉದಯವಾಣಿ ಹುಬ್ಬಳ್ಳಿ ಆವೃತ್ತಿ ಬಗ್ಗೆ ಉದಯವಾಣಿ ಗ್ರೂಪ್ ಎಡಿಟರ್ ರವಿ ಹೆಗಡೆಗೆ

ನನ್ನ ವಿರುದ್ಧ ಆರೋಪಗಳಿಗೆ ಇಗೋ ಸಮಾರೋಪ

ಈ ವರ್ಷ ಸಂಕ್ರಾಂತಿ ನನ್ನ ವೃತ್ತಿ ಜೀವನದಲ್ಲೂ ಸಂಕ್ರಾಂತಿಯ ಗಳಿಗೆ. ಆ ವೇಳೆಯಲ್ಲಿ ನಾನು ದಿಢೀರನೆ ಸುವರ್ಣ ನ್ಯೂಸ್ ಬಿಡುವ ನಿರ್ಧಾರ ಕೈಗೊಂಡಿದ್ದು, ಕನ್ನಡದ ಎರಡು ಪ್ರಮುಖ ಪತ್ರಿಕೆಗಳಲ್ಲಿ ಯಾವುದನ್ನು ಸೇರಲಿ ಎಂಬ ಆಯ್ಕೆಯ ಮುಂದೆ ಕುಳಿತು ಹಗಲೂ ರಾತ್ರಿ ಯೋಚಿಸಿದ್ದು, ನನ್ನ ಸಹೋದ್ಯೋಗಿಗಳೋಡನೆ ಈ ಕುರಿತು ಚರ್ಚಿಸಿದ್ದು, ನಂತರ ಉದಯವಾಣಿಯ ಗ್ರೂಪ್ ಎಡಿಟರ್ ಆದದ್ದು, ಯಾವುದೇ ತಯಾರಿ ಇಲ್ಲದೇ ಮೂರು ಬಜೆಟ್, ವಿಶ್ವಕಪ್ ಕ್ರಿಕೆಟ್ ಮುಂತಾದ ಪ್ರಮುಖ ದಿನಗಳ ಪತ್ರಿಕೆ ರೂಪಿಸಿದ್ದು, ದಿಢೀರನೆ ಹುಬ್ಬಳ್ಳಿ ಆವೃತ್ತಿ ಆರಂಭಿಸಿದ್ದು, ಪತ್ರಿಕೆಯ ಮುಂದಿನ 5 ವರ್ಷಗಳ ನೀಲನಕ್ಷೆ ರೂಪಿಸಲು ಕೈಹಾಕಿದ್ದು, ಮಂಗಳೂರು ಆವೃತ್ತಿಯ ವೃತ್ತಿಸೂಕ್ಷ್ಮಗಳನ್ನು ಅಭ್ಯಸಿಸಿದ್ದು, ಬೆಂಗಳೂರು ಆವೃತ್ತಿಯ ಮೂಲಸೌಕರ್ಯ ಹೆಚ್ಚಿಸಿಕೊಳ್ಳಲು ಅವಿರತ ಪ್ರಯತ್ನಿಸಿದ್ದು…. ಹೀಗೆ ಒಂದು ದಿನವೂ ಬಿಡುವಿಲ್ಲದೇ ಕಳೆದ 5 ತಿಂಗಳು ಅದು ಹೇಗೆ ಉರುಳಿತೋ ಗೊತ್ತಾಗುತ್ತಲೇ ಇಲ್ಲ.

ಉದಯವಾಣಿ ಹುಬ್ಬಳ್ಳಿ ಆವೃತ್ತಿ ಬಗ್ಗೆ ಉದಯವಾಣಿ ಗ್ರೂಪ್ ಎಡಿಟರ್ ರವಿ ಹೆಗಡೆ ಬರೆದಿದ್ದಾರೆ. ಅವರಿಗೆ ಪ್ರತಿಕ್ರಿಯೆ.

ಮೊದಲನೆಯದಾಗಿ ಉದಯವಾಣಿಯಲ್ಲಿ ಚಲನಶೀಲತೆಗೆ ಕೈಹಾಕಿರುವ ನಿಮಗೆ ಶುಭವಾಗಲಿ.

ಎರಡನೆಯದಾಗಿ ಮೀಡಿಯಾ strategy ಗಳ ಬಗ್ಗೆ ಬರೆದಿದ್ದೀರಿ. ಹಾಗಾಗಿ ಒಂದು ವಿಷಯವನ್ನ ಪ್ರಸ್ತಾಪಿಸಲಿಕ್ಕೆ ಇಚ್ಷಿಸುತ್ತೇನೆ. ಮೊನ್ನೆ ಮೊನ್ನೆ ಹುಬ್ಬಳ್ಳಿ ಆವೃತ್ತಿ ಬಿಡುಗಡೆ ಮಾಡಿದ್ದೀರಿ. ನೋಡಿದ್ದೇನೆ. ಕನ್ನಡದ ಬೇರಾವ ಪತ್ರಿಕೆಯಲ್ಲೂ ಇರದ ಪ್ರಿಂಟ್ ಕ್ವಾಲಿಟಿ ಉದಯವಾಣಿಗೆ ಇದೆ. ಹುಬ್ಬಳ್ಳಿ ಆವೃತ್ತಿ ಮೂಲಕ ಉದಯವಾಣಿ “ಕರಾವಳಿ” ಬ್ರಾಂಡಿನಿಂದ ಆಚೆಗೆ ಯೋಚಿಸಿದೆ. ಆದರೆ, ಹುಬ್ಬಳ್ಳಿ ಆವೃತ್ತಿಯಲ್ಲಿ ನಾನು ಗಮನಿಸಿದಂತೆ ಈ ಕಡೆಯ ಭಾಷಾ ಬಳಕೆ ನಡೆದಿಲ್ಲ. ಅಟ್ಲೀಸ್ಟ್ ದಿನಕ್ಕೆ ಒಂದೆರಡು ಪುಟ್ಟ ಲೇಖನಗಳು ಹುಬ್ಬಳ್ಳಿ ಭಾಷೆಯಲ್ಲಿ ಬರಬೇಕು. ಇದು ಜನರಿಗೆ ಆಪ್ತ ಮನೋಭಾವವನ್ನ ನೀಡಲು ಶಕ್ತವಾಗುತ್ತದೆ.

ಇನ್ನು ಉದಯವಾಣಿಯ ಅಂಕಣಕಾರರು ಕರಾವಳಿ ಭಾಗದವರು. ಇಲ್ಲಿನ ಜನರಿಗೆ ಫಾದರ್ ಅಂದ್ರೆ ತಿಳಿಯಲ್ಲ. ಇಲ್ಲಿನ ಪ್ರಿಯಾರಿಟಿಗಳೇ ಬೇರೆ. ಪ್ರಿಯಾರಿಟಿಗಳನ್ನ ಆಧರಿಸಿ ಮೀಡಿಯಾ strategy ಗಳು ಅನುಷ್ಟಾನಗೊಳ್ಳಬೇಕು. ನಮ್ ಕಡೆ ಪಾಟೀಲ, ಕಟ್ಟಿಮನಿ, ಅಂಗಡಿ ಮುಂತಾದ ಹೆಸರುಗಳು ಚಾಲ್ತಿಯಲ್ಲಿರುತ್ತವೆ. ಹಾಗಾಗಿ ಉತ್ತರ ಕರ್ನಾಟಕದ ಕಡೆಯ ಮಂದಿಯನ್ನೂ ಅಂಕಣಕಾರಿಕೆಗೆ ಸೇರಿಸಿಕೊಂಡರೆ ಈ ಕಡೆಯ ಪತ್ರಿಕೆ ಅನ್ನೋ ಭಾವ ಮೂಡಿಸಲಿಕ್ಕೆ ಸಹಕಾರಿಯಾಗಬಹುದು.

ಮೂರನೆಯದಾಗಿ, ಹುಬ್ಬಳ್ಳಿಯಲ್ಲಿ ಪ್ರಮುಖ ಬೀದಿಗಳಲ್ಲಿ, ಚನ್ನಮ್ಮನ ವೃತ್ತದಲ್ಲಿ ಹಾಕಿರುವ ಅಡ್ವರ್ಟೈಸ್ಮೆಂಟ್ ಗಳಲ್ಲಿ ಸ್ಥಳೀಯ ಸುದ್ದಿಗೆ ಪ್ರಾಧಾನ್ಯ ಕೊಡುವುದಾಗಿ ಹೇಳಿದ್ದೀರಿ. ಆದ್ರೆ, ಸ್ಥಳೀಯ ನಾಡಿ ಮಿಡಿತ ಅರಿಯುವಲ್ಲಿ ಇನ್ನೂ ಪ್ರಾವೀಣ್ಯ ಬೇಕಿದೆ ಅನ್ನಿಸುತ್ತದೆ. ಈಗಲೂ ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕ ಬಿಟ್ಟರೆ ಬೇರೆಯದಕ್ಕೆ ಪ್ರತಿಷ್ಠೆ ಕಡಿಮೆ. ಇದಕ್ಕೆ ಕಾರಣಗಳೂ ಇವೆ. ಅಜ್ಜ ಮುತ್ತಜ್ಜನ ಕಾಲದಿಂದ ಮನೆಗೆ ಬರುತ್ತಿದ್ದ ಪೇಪರ್ ನ್ನ ಬದಲಿಸಲಿಕ್ಕೆ ಮನಸ್ಸಾಗಿಲ್ಲ. ಆದ್ರೆ, ಸಂಯುಕ್ತ ಕರ್ನಾಟಕದ ಹಳೇ ತುಕ್ಕು ಹಿಡಿದ ನೀತಿಗಳು, strategy ಗಳು ಒಂದು ದಿನ ಪೇಪರ್ರನ್ನೇ ಮುಳುಗಿಸಿದರೆ ಆಶ್ಚರ್ಯವಿಲ್ಲ. ಆ ದಿನಗಳೂ ದೂರವಿಲ್ಲ.

ಹೊಸತನವನ್ನ ಬಯಸುವ ಯುವ ಜನತೆ ವಿಜಯ ಕರ್ನಾಟಕ, ಕನ್ನಡ ಪ್ರಭದತ್ತ ಮುಖ ಮಾಡಿದ್ದಾರೆ. ಅಂಥಾ ಯುವಜನತೆಯನ್ನ ಉದಯವಾಣಿಯತ್ತಲೂ ಒಲಿಸಿಕೊಳ್ಳಬೇಕಿದೆ. ಇದೆಲ್ಲದಕ್ಕೂ ಸ್ಥಳೀಯ ಭಾಷಾ ಸೊಗಡು ಸೇರಿದರೆ ಪತ್ರಿಕೆ ಉತ್ತರ ಕರ್ನಾಟಕದಲ್ಲೂ ಭದ್ರವಾಗಿ ಕಾಲೂರಬಹುದು.

ಶುಭವಾಗಲಿ.

ಬಯೋ ಟೆಕ್ನಾಲಜಿ : ಸುಖಾ ಸುಮ್ಮನೆ ಬೀಳಬೇಡಿ ಹಳ್ಳಕ್ಕೆ..!

ಈ ಲೇಖನ ಬರೆದು ಒಂದು ವರ್ಷವಾಯಿತು. ಹಿಂದಿನ ಸಾರಿ ಸಿ.ಇ.ಟಿ ಕೌನ್ಸಿಲಿಂಗ್ ಶುರುವಾಗುವ ಮೊದಲು ಕನ್ನಡದ ಎಲ್ಲ ಪತ್ರಿಕೆಗಳಿಗೆ ಮೇಲ್ ಮಾಡಿದ್ದೆ. ಪಾಪ ಪತ್ರಕರ್ತರಿಗೆ ಐಟಿ-ಬಿಟಿ ಪದ ಬಿಟ್ಟು ಬೇರೆ ಏನೂ ಗೊತ್ತಿಲ್ಲ. ತಿಳಿದುಕೊಳ್ಳುವ ಆಸಕ್ತಿ ಕೂಡಾ ಇದ್ದಂತಿಲ್ಲ. ತಿಳಿದವರು ಹೇಳಿದರೂ ಕೇಳುವ ವ್ಯವಧಾನವೂ ಇಲ್ಲ. ಬಯೋ ಟೆಕ್ನಾಲಜಿ ಮಾಡಿದ ಹುಡುಗರು ಕೆಲಸಕ್ಕಾಗಿ ಎಷ್ಟು ಅಡ್ಡಾಡುತ್ತಿದ್ದಾರೆ, ಒದ್ದಾಡುತ್ತಿದ್ದಾರೆ ಅನ್ನುವುದನ್ನ ವಿವರಿಸಿ ಬರೆದಿದ್ದೆ. ನನ್ನ ಗೆಳೆಯರ ಪಡಿಪಾಟಲುಗಳನ್ನ ಕಣ್ಣಾರೆ ಕಂಡಿದ್ದೇನೆ. ವಿದ್ಯೆ, ಪರ್ಸೆಂಟೇಜು, ಅವಕಾಶ ಇದ್ದರೂ ಬೇರೆ ಬ್ರಾಂಚುಗಳನ್ನ ಆಯ್ಕೆಮಾಡಿಕೊಳ್ಳದೇ ಬಯೋ ಟೆಕ್ನಾಲಜಿ ಮಾಡಿ ಎಲ್ಲಿಯೂ ಸಲ್ಲದವರಾಗಿ ಉಳಿದಿರುವ ಸಾವಿರಾರು ಮಂದಿ ಹುಡುಗರ ಅಂತರಾಳದ ಮಾತುಗಳಿಗೆ ಕನ್ನಡಿ ಹಿಡಿದಿದ್ದೆ. ಪಾಪ ನಮ್ಮ ಕನ್ನಡ ಪತ್ರಕರ್ತರಿಗೆ ಟೆಕ್ನಾಲಜಿಯ ಒಳಸುಳಿಗಳು ಅರ್ಥವಾಗಬೇಕಲ್ಲ? ಅಟ್ಲೀಸ್ಟ್ ಈ ಸಲವಾದರೂ ಪ್ರಕಟಣೆಯ ಭಾಗ್ಯ ಕಾಣಲಿ. ವಿದ್ಯಾವಂತ ಹುಡುಗರು, ಪೋಷಕರು ಖೆಡ್ಡಕ್ಕೆ ಬೀಳುವುದು ತಪ್ಪಲಿ ಎಂಬ ಆಶಯವಿದೆ.

“ಐಟಿ ಬಿಟಿಯಲ್ಲಿ ಕರ್ನಾಟಕ ದೇಶದಲ್ಲೇ ನಂ 1“, “ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಐಟಿ-ಬಿಟಿ ದಿಗ್ಗಜರ ದಂಡು”,”ಐಟಿ-ಬಿಟಿ ವಲಯಗಳಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಠಿ” ಮುಂತಾದ Fancy ಹೆಡ್ಡಿಂಗುಗಳು ಪತ್ರಿಕೆಗಳಲ್ಲೆಲ್ಲಾ ರಾರಾಜಿಸಿದವು. ಅದರಲ್ಲಿ ಐಟಿಯ ಪಾಲೆಷ್ಟು ಬಿಟಿಯ ಪಾಲೆಷ್ಟು ಅನ್ನುವುದರ ಅಂಕಿ ಅಂಶಗಳಿಲ್ಲ. ಒಂದೇ ಒಂದು ಪ್ರಾಸಪದದ ಅವಾಂತರವಿದು. ಜುಲ್ಯ್ 14ರಿಂದ ಸಿ.ಇ.ಟಿ. ಕೌನ್ಸಲಿಂಗ್ ಶುರುವಾಗಿದೆ. ಜನರನ್ನ ಸರ್ಕಾರಗಳು, ಆಡಳಿತ ವ್ಯವಸ್ಥೆ, ಕಾಲೇಜುಗಳು ಮತ್ತು ಪತ್ರಿಕೆಗಳು ಜನರನ್ನ ಬಿ.ಟಿ ಹೆಸರಿನಲ್ಲಿ ಮೂರ್ಖರನ್ನಾಗಿಸಿವೆ. ಆದರೆ, ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿ ಪೋಷಕರು ಈ ನಿಟ್ಟಿನಲ್ಲಿ ವಾಸ್ತವಿಕತೆ ಅರಿತು ಪ್ರಜ್ಞಾವಂತಿಕೆ ಮೆರೆಯಬೇಕೆಂಬುದು ಈ ಲೇಖನದ ಆಶಯ.

 ಪೋಷಕರ ಮತ್ತು ಪಿ.ಯು.ಸಿ ಮುಗಿಸಿದ ವಿದ್ಯಾರ್ಥಿವೃಂದದ ತಪ್ಪು ಗ್ರಹಿಕೆಗಳಿಂದಲೋ ಅಥವಾ ವಸ್ತು ಸ್ಥಿತಿ ಮರೆಮಾಚಿ ಬರೆದ ಪತ್ರಿಕಾ ವರದಿಗಳಿಂದಲೋ ಬಯೋಟೆಕ್ನಾಲಜಿ ಬಗ್ಗೆ ಆಕರ್ಷಿತರಾಗುತ್ತಾರೆ. ಜೊತೆಗೆ, ಪತ್ರಿಕೆಗಳಲ್ಲಿ “ಬಿಟಿ” ಶಬ್ಧ ಐಟಿಗೆ ಪ್ರಾಸಪದವಾಗಿ ಪ್ರತಿ ದಿನವೂ ಚಾಲ್ತಿಯಲ್ಲಿರುತ್ತದೆ. ಸರ್ಕಾರ ಹೇಳಿದ ಹೇಳಿದ ಹೇಳಿಕೆಗಳಿಂದಾಗಲೀ, ಪತ್ರಿಕಾ ವರದಿಗಳಿಂದಾಗಲೀ ತಮ್ಮ ಮಗ/ಮಗಳು ಎಂಜಿನಿಯರಿಂಗ್‍ನಲ್ಲಿ ಬಯೋಟೆಕ್ನಾಲಜಿ ಓದಲಿ ಎಂದು ಬಯಸುತ್ತಾರೆ. ಜೊತೆಗೆ ವಿದ್ಯಾರ್ಥಿವಲಯದಲ್ಲೂ ಇದು ಚಿರಪರಿಚಿತ ಶಬ್ಧ. ಆದರೆ, ಕ್ಷೇತ್ರದ ಬಗ್ಗೆ ಮಾಹಿತಿಯಾಗಲೀ, ಡಿಗ್ರಿ ಮುಗಿಸಿ ಹೊರಬಂದ ಪದವೀಧರರ ಕೆಲಸ ಸಿಗದ ಹತಾಶೆಗಳಾಗಲೀ, ಚಿಂತಾಕ್ರಾಂತತೆಗಳಾಗಲೀ, ಅನಿವಾರ್ಯವಾಗಿ ಕಂಪ್ಯೂಟರ್ ಕೋರ್ಸುಗಳನ್ನ ಮಾಡುವ ಅನಿವಾರ್ಯತೆಗಳಾಗಲೀ ಅಪರಿಚಿತ.

 ಬಯೋ ಟೆಕ್ನಾಲಜಿ ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದೆ. ಆದರೆ, ಆ ಭವಿಷ್ಯ ಬಯೋಟೆಕ್ನಾಲಜಿ ಕೋರ್ಸು ಓದಿದವರಿಗೆ ಅನ್ವಯಿಸುವುದಿಲ್ಲ..! ವಿರೋಧಾಭಾಸವಾದರೂ ಕಟುಸತ್ಯ.! Electronics, Electrical, Instrumentation, Telecommunication ಓದಿದ ಹುಡುಗನಿಗೆ Hardware/Software ಕಂಪನಿಯಲ್ಲಿ ಕೆಲಸ ಸಿಗುತ್ತೆ. Computer Science ಓದಿದ ಹುಡುಗರಿಗೆ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. Mechanical ಓದಿದ ಹುಡುಗರಿಗೆ ಸ್ಟೀಲ್ ಇಂಡಸ್ಟ್ರಿಯಲ್ಲೋ, ಪೆಟ್ರೋಲಿಯಂ ರಿಫೈನರಿಯಲ್ಲೋ ಕೆಲಸ ದೊರಕುತ್ತದೆ. ಸಿವಿಲ್ ಓದಿದವರಿಗೆ ಕಟ್ಟಡ ನಿರ್ಮಾಣ ಕಂಪನಿಗಳಲ್ಲಿ ಕೆಲಸ ದೊರಕಿಸಿಕೊಳ್ಳಲಿಕ್ಕೆ ಅವಕಾಶಗಳಿವೆ. ಆದರೆ, ಬಯೋ ಟೆಕ್ನಾಲಜಿ, ಬಯೋ ಮೆಡಿಕಲ್, ಮೆಡಿಕಲ್ ಎಲೆಕ್ಟ್ರಾನಿಕ್ಸ್ ಓದಿದ ಹುಡುಗರಿಗೆ ಸಾಮರ್ಥ್ಯಕ್ಕೆ ತಕ್ಕ, ಗೌರವಾನ್ವಿತ ಸಂಭಾವನೆಯ ಉದ್ದಿಮೆಗಳಿಲ್ಲ. ಹಾಗಾಗಿಯೇ ಈ ಎಲ್ಲಾ ಬ್ರಾಂಚುಗಳಲ್ಲಿ ಓದಿದವರ ಸ್ಥಿತಿ ಅತಂತ್ರವಾಗಿದೆ. ಕಂಪನಿಗಳಿಗೆ ಆಯ್ಕೆಯಾಗುವ ಪ್ರಮಾಣ ತುಂಬಾ ವಿರಳ. ಅರವತ್ತು ವಿದ್ಯಾರ್ಥಿಗಳಿರುವ ಬ್ರಾಂಚಿನಲ್ಲಿ ಒಬ್ಬಿಬ್ಬರಿಗೆ ಕೆಲಸ ದೊರಕುವ ಅವಕಾಶಗಳಿರುತ್ತವೆ ಅಷ್ಟೆ.

ಬಿ.ಇ. ಬಯೋ ಟೆಕ್ನಾಲಜಿ ಓದಿದಾಕ್ಷಣ ಬಯೋಕಾನ್‍ನ ಕಿರಣ ಮುಜುಂದಾರ್ ನೇಮಕ ಮಾಡಿಕೊಳ್ಳುವುದಿಲ್ಲ. ಬದಲಿಗೆ ಅವರು ಸ್ನಾತಕೋತ್ತರ ಪದವೀಧರರಿಗೆ ಮಣೆ ಹಾಕುತ್ತಾರೆ. ಎಂ.ಎಸ್ಸಿ. ಮೈಕ್ರೋಬಯೋಲಜಿ, ಬಯೋಕೆಮಿಸ್ಟ್ರಿ ಓದಿದವರನ್ನ ನೇಮಿಸಿಕೊಳ್ಳುತ್ತಾರೆ. ಬಿ.ಎಸ್ಸಿ ಮುಗಿಸಿ, ಎಂ.ಎಸ್ಸಿ ಮಾಡಲಿಕ್ಕೆ 5 ವರ್ಷಗಳು ಹಿಡಿಯುತ್ತವೆ. ಅದೇ ಬಿ.ಇ. ಮುಗಿಸಿ ಎಂ.ಟೆಕ್ ಮಾಡಲಿಕ್ಕೆ 6 ವರ್ಷಗಳು ಹಿಡಿಯುತ್ತವೆ. ಜೊತೆಗೆ ಬಿ.ಇ. ಓದುವ ಖರ್ಚೇನೂ ಕಮ್ಮಿ ಇಲ್ಲ. ಹಾಗಾಗಿ, ಸಹಜವಾಗಿ ಬಿ.ಇ. ಓದಿದವರ ಸಂಬಳ ನಿರೀಕ್ಷೆಗಳು ತುಸು ಹೆಚ್ಚೇ. ಇವೆಲ್ಲವುಗಳ ಜೊತೆಗೆ ಬಯೋ ಟೆಕ್ನಾಲಜಿಯ ಪಠ್ಯಕ್ರಮ ಚೌ ಚೌ ಭಾತ್‍ನಂತಿದೆ. ಎಲ್ಲ ವಿಷಯಗಳಲ್ಲಿ ಅರೆ ಪರಿಣಿತಿ ಹೊಂದುವಂತೆ ಪಠ್ಯಕ್ರಮ ರಚಿಸಲಾಗಿದೆ. ಇದೂ ಕೂಡಾ ಬಿ.ಇ. ಬಯೋ ಟೆಕ್ನಾಲಜಿ ಓದಿದವರನ್ನ ಕಂಪನಿಗಳು ನೇಮಿಸಿಕೊಳ್ಳಲಿಕ್ಕೆ ಹಿಂದು ಮುಂದು ನೋಡಲಿಕ್ಕೆ ಕಾರಣೀಭೂತವಾಗಿರಬಹುದು. ಲೈಫ್ ಸೈನ್ಸ್‍ನ ಎಲ್ಲ ಶಾಖೆಗಳಲ್ಲಿ ಪರಿಣಿತಿ ಹೊಂದುವಂತೆ ಸಿಲೆಬಸ್ ರೂಪಿಸಲಾಗಿಲ್ಲ. ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಕ್ಷೇತ್ರದ Operating system, Linux, Pearl ಗಳನ್ನೂ ಸೇರಿಸಲಾಗಿದೆ.! ಈ ವಿಷಯಗಳು ಸಾಫ್ಟ್‍ವೇರ್ ಕ್ಷೇತ್ರಕ್ಕೆ ಸಂಬಂಧಿಸಿದವುಗಳು. ಈ ಬ್ರಾಂಚುಗಳ ಹುಡುಗರು ಸಾಫ್ಟ್‍ವೇರ್ ಕ್ಷೇತ್ರಕ್ಕೆ ಕುರಿತಂತೆ ಮೊದಲ ಸೆಮಿಸ್ಟರಿನಲ್ಲಿ ಮಾತ್ರ ಸಿ ಪ್ರೋಗ್ರಾಮಿಂಗನ್ನ ಓದಿರುತ್ತಾರೆ. ನಂತರ ಅದರ ಸಂಪರ್ಕವೇ ಇರುವುದಿಲ್ಲ.

 ಬಡ ಪ್ರತಿಭಾವಂತ ವಿದ್ಯಾರ್ಥಿಗಳು, ಮಧ್ಯಮವರ್ಗದ ವಿದ್ಯಾರ್ಥಿ ಸಮೂಹ ಬಹುಪಾಲು ಶಿಕ್ಷಣ ಸಾಲದಲ್ಲೇ ಓದು ಮುಂದುವರೆಸುವುದು. ಬಿ.ಇ. ಮುಗಿಸಿದ ನಂತರ ಕೆಲಸ ಸಿಗದೇ ಹೋದರೆ, ಸಾಲ ತೀರಿಸುವುದಾದರೂ ಹೇಗೆ? ಎಲ್ಲರ ಬಳಿಯೂ ಸ್ನಾತಕೋತ್ತರ ಪದವಿ ಎಂ.ಟೆಕ್ ಓದುವಷ್ಟು ಹಣವಾಗಲೀ ಸಮಯವಾಗಲೀ ಇರುವುದಿಲ್ಲವಲ್ಲ. ಹಾಗಾದರೆ, ಈ ಬ್ರಾಂಚುಗಳ ಸೇರ್ಪಡೆಯ ಔಚಿತ್ಯವಾದರೂ ಏನು? ನಿರುದ್ಯೋಗಿಗಳ ಸಾಲು ಸಾಲು ಸೃಷ್ಟಿಯೇ?

 ಬಯೋ ಮೆಡಿಕಲ್ ಓದಿದವರನ್ನ ಕೆಲವು ದೊಡ್ಡ ದೊಡ್ಡ ಆಸ್ಪತ್ರೆಗಳು ವಿದೇಶದಿಂದ ಆಮದಾದ ಎಮ್.ಆರ್.ಐ, ಸಿ.ಟಿ ಸ್ಕ್ಯಾನ್ ಮಷೀನ್‍ಗಳನ್ನ ನೋಡಿಕೊಳ್ಳಲಿಕ್ಕೆ ಬಯೋ ಮೆಡಿಕಲ್ ಎಂಜಿನಿಯರ್ ಆಗಿ ನೇಮಕ ಮಾಡಿಕೊಳ್ಳುತ್ತವಾದರೂ ಸಂಬಳ 8-10 ಸಾವಿರವಷ್ಟೆ. ಜೊತೆಗೆ ಓದಿದ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳೆಲ್ಲಾ ಕನಿಷ್ಟ 20 ಸಾವಿರ ಎಣಿಸುವಾಗ ಇವರು ಮಾಡಿದ ತಪ್ಪಾದರೂ ಏನು? ಸಾಫ್ಟ್‍ವೇರ್ ಕಂಪನಿಗಳು ಈ ಕ್ಷೇತ್ರದವರನ್ನ ನೇಮಿಸಿಕೊಳ್ಳುತ್ತವಾದರೂ ಅವರು ಬಯೋಟೆಕ್ನಾಲಜಿ ಸಂಬಂಧಿತ ಕ್ಷೇತ್ರದಲ್ಲೇನೂ ಪ್ರಾಜೆಕ್ಟ್‍ಗಳನ್ನ ಹೊಂದಿಲ್ಲ. ಮತ್ತೆ ಕಂಪ್ಯೂಟರ್ ಕೋರ್ಸುಗಳನ್ನ ಮಾಡಿಕೊಂಡು, ಐಟಿಯೆಡೆಗೆ ವಲಸೆ ಹೋಗಬೇಕು. ಏನೇ ಓದಿದರೂ ಐಟಿಯೆಡೆಗೆ ಹೋಗಬೇಕಾದ ಅನಿವಾರ್ಯತೆ ಇದೆ ಎಂದಾದರೆ, ಈ ಬ್ರಾಂಚುಗಳಲ್ಲಿ ಓದುವ ಔಚಿತ್ಯವಾದರೂ ಏನು?

 ಇನ್ನು ಈ ಕ್ಷೇತ್ರಗಳ ಸ್ನಾತಕೋತ್ತರ ಪದವಿ ವಿಚಾರ. ಕರ್ನಾಟಕದಲ್ಲಿ ವಿ.ಟಿ.ಯು. ಅಡಿಯಲ್ಲಿ ಬಯೋಟೆಕ್ನಾಲಜಿಗೆ ಸಂಬಂಧಿಸಿದ ಎರಡು ಕೋರ್ಸುಗಳಿವೆ. ಬಯೋ ಇನ್ಫಾರ್ಮೆಟಿಕ್ಸ್ ಮತ್ತು ಸಿಗ್ನಲ್ ಪ್ರೋಸೆಸ್ಸಿಂಗ್. ಎಂ.ಟೆಕ್.ನಲ್ಲಿ ಪ್ರತಿ ಬ್ರಾಂಚಿಗೆ, ಪ್ರತಿ ಕಾಲೇಜಿಗೆ ಇರುವ ಸೀಟುಗಳ ಸಂಖ್ಯೆ 18 ರಿಂದ 20. ಇನ್ನುಳಿದ ಸಾವಿರಾರು ವಿದ್ಯಾರ್ಥಿಗಳ ಗರಿಯೇನು? ಮಣಿಪಾಲ್ ವಿವಿಯಲ್ಲಿ ಮೆಡಿಕಲ್ ಸಾಫ್ಟ್‍ವೇರ್ ಎಂಬ ಎಂ.ಎಸ್. ಪದವಿಯಿದೆ. ಈ ಪದವಿ ಪಡೆದರೆ ಅವಕಾಶಗಳನ್ನ ಹೆಚ್ಚಾಗಿಸಿಕೊಳ್ಳಬಹುದು. ಆದರೆ, ಸ್ನಾತಕೋತ್ತರ ಓದಿಸುವಷ್ಟು ಶ್ರೀಮಂತರಲ್ಲವಲ್ಲ ಬಡ ಪ್ರತಿಭಾವಂತ ವರ್ಗ. ಕರ್ನಾಟಕದಲ್ಲಿ ಬಿ.ಇ ಮುಗಿಸಿ ಪಕ್ಕದ ತಮಿಳ್ನಾಡಿನ ಶಾಸ್ತ್ರ ವಿವಿಯಲ್ಲಿ ಬಯೋ ಇನ್ಫಾರ್ಮೆಟಿಕ್ಸ್‍ನಲ್ಲಿ ಎಂ.ಟೆಕ್ ಮಾಡಿಬಂದವರಿಗೂ ಅವಕಾಶಗಳೇನೂ ಹೆಚ್ಚಾಗಿಲ್ಲ. ಹೆಚ್ಚಿನ ಕಾಲೇಜುಗಳಲ್ಲಿ ತಮ್ಮ ವಿದ್ಯಾರ್ಥಿಗಳನ್ನೇ ಲೆಕ್ಚರಿಕೆಗೆ ತೆಗೆದುಕೊಳ್ಳುವುದಿಲ್ಲ. ಎಂ.ಎಸ್ಸಿ. ಆದವರನ್ನ ತೆಗೆದುಕೊಂಡು ಕಡಿಮೆ ವೇತನಕ್ಕೆ ದುಡಿಸಿಕೊಳ್ಳುವ ಕಾಲೇಜುಗಳಿವೆ.

 ಬಯೋ ಟೆಕ್ನಾಲಜಿಗೆ ಹೋಗುವ ಹುಡುಗರು ಸಾಮಾನ್ಯ ಬುದ್ಧಿವಂತರೆಂದು ಈ ಲೇಖನ ಹೇಳ ಹೊರಟಿಲ್ಲ. ಆದರೆ, ಬಯೋಟೆಕ್ನಾಲಜಿಯಲ್ಲಿ ಆಸಕ್ತಿ ಹೊಂದಿದವರಿಗೆ ಅವಕಾಶಗಳಿಲ್ಲ ಅನ್ನುವುದನ್ನ ಹೇಳಲಿಚ್ಛಿಸುತ್ತದೆ. ಬಯೋ ಟೆಕ್ನಾಲಜಿ ಕೂಡಾ ಅಪಾರ ಅವಕಾಶಗಳಿರುವ ಕ್ಷೇತ್ರ. ಆ ಅವಕಾಶಗಳು ನಮಗೆ ಸಿಗದಿದ್ದರೆ ಅದರಿಂದೇನು ಪ್ರಯೋಜನ? ಆದ್ರೆ, ಈ ಕ್ಷೇತ್ರದ ಎಲ್ಲ ಸಂಶೋಧನೆಗಳು ನೆಡೆಯುತ್ತಿರುವುದು ಅಮೇರಿಕಾ, ಬ್ರಿಟನ್‍ಗಳಲ್ಲಿ. ಜಿ.ಆರ್.ಇ. ಮತ್ತು ಟೋಫೆಲ್ ಪರೀಕ್ಷೆಗಳನ್ನ ಪಾಸು ಮಾಡಿಕೊಂಡು ಅಲ್ಲಿ ಹೋಗಲಿಕ್ಕೆ ಎಷ್ಟು ಜನರಿಗೆ ಸಾಧ್ಯವಿದೆ. ಎಷ್ಟು ಮಧ್ಯಮ ವರ್ಗದ ಪೋಷಕರಿಗೆ 20-30.ಲಕ್ಷ ವ್ಯಯಿಸಿ ಅಲ್ಲಿ ಸ್ನಾತಕೋತ್ತರ ಪದವಿ ಓದಿಸುವಷ್ಟು ಸಾಮರ್ಥ್ಯವಿದೆ? ಕನ್ನಡಿಯೊಳಗಿನ ಗಂಟನ್ನ ತೋರಿಸಿ ಮೋಸ ಮಾಡಬಾರದು ಅಲ್ವಾ?

ಗಣೇಶ್.ಕೆ.

ಬೆಂಗಳೂರಿನಲ್ಲಿ ಜೋಳದ ರೊಟ್ಟಿ ಸಿಗುವ ಅಂಗಡಿ/ಹೋಟೆಲು/ಖಾನಾವಳಿಗಳ ಪಟ್ಟಿ

Status

ಬೆಂಗಳೂರಿನಲ್ಲಿ ಜೋಳದ ರೊಟ್ಟಿ ಸಿಗುವ ಅಂಗಡಿ/ಹೋಟೆಲು/ಖಾನಾವಳಿಗಳ ಪಟ್ಟಿ

      ನಮ್ಮ ಉತ್ತರ ಕರ್ನಾಟಕದ ಮಂದಿಗೆ ಜ್ವಾಳದ ರೊಟ್ಟಿ(ಜೋಳದ ರೊಟ್ಟಿ ಅಂದ್ರೆ ಅದು ಬೆಂಗಳೂರಿನ ಉಚ್ಛಾರಣೆಯಾದೀತು), ಛಲೋ ಬಾಜಿ ಸಿಗ್ಲಿಲ್ಲ  ಅಂದ್ರೆ ಬದ್ಕಕ್ಕೇ ಆಗದ ಪರಿಸ್ಥಿತಿ ನಿರ್ಮಾಣವಾಗುತ್ತೆ. ಉತ್ತರದ ಆಹಾರಪದ್ಧತಿಯೇ ವಿಶಿಷ್ಟ. ಬೆಂಗಳೂರಿನಲ್ಲಿ ಇರುವ ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ, ಬಾಗಲಕೋಟೆ, ಬಿಜಾಪುರ, ಗುರ್ಲಬರ್ಗ, ಬೀದರ್ ಕಡೆಯ ಮಂದಿಗೆ ರೊಟ್ಟಿ ಇಲ್ಲದ ಊಟ ಒಗ್ಗುವುದಿಲ್ಲ. ತುಂಬಾ ಮಂದಿ ರೊಟ್ಟಿ ಊಟ ಸಿಗದೇ ಬೆಂಗಳೂರಿನ ಏರಿಯಾಗಳನ್ನ ಬದಲಿಸಿದವರಿದ್ದಾರೆ. ಹಾಗಾಗಿ, ಬೆಂಗಳೂರಿನಲ್ಲಿ ನೆಲೆಸಿರುವ, ನೆಲೆಸಲಿಚ್ಛಿಸುವ, ಹೊಸದಾಗಿ ಸೇರ್ಪಡೆಯಾಗುತ್ತಿರುವ ಮಂದಿಗೆ ರೊಟ್ಟಿಯದೇ ಚಿಂತೆ. ಹಾಗಾಗಿ ಬಿಸಿಲಹನಿ ಬ್ಲಾಗಿನವರು ರೊಟ್ಟಿ ಸಿಗುವ ಖಾನಾವಳಿ, ಹೊಟೆಲುಗಳ ಪಟ್ಟಿ ಮಾಡಿದ್ದಾರೆ. ಅದನ್ನ ಯಥಾವತ್ತು ಪ್ರಕಟಿಸುತ್ತಿದ್ದೇವೆ. ಅವರ ಅನುಮತಿ ಇರುವುದೆಂದು ಭಾವಿಸಿರುತ್ತೇವೆ. ಇಷ್ಟೊಂದು ಮಾಹಿತಿ ಸಂಗ್ರಹಿಸಿರುವಾತ ತನ್ನ ಬೆಂಗಳೂರಿನ ಬದುಕಿನಲ್ಲಿ ರೊಟ್ಟಿ ಊಟಕ್ಕೆ ಬಹಳ ಪರದಾಡಿರಬೇಕು. ಈ ಎಲ್ಲಾ ಮಾಹಿತಿ ಕಲೆ ಹಾಕಲು ಪಟ್ಟ ಶ್ರಮ ಸಾರ್ಥಕವಾಗಲಿ. ಅವರ ಶ್ರಮಕ್ಕೊಂದು ಸಲಾಮು.

 1. ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ.

2. ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ3. ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ)

4. ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361)

5. ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734)

6. ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ.

7. ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.)

8. ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994)

9. ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201)

10. ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650

11. ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ.

12. ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು

13. ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ

ಘಾಟ್,ರಾಜಾಜಿನಗರ.(ಫೊನ್ ನಂ: 9448542268 )

14. ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ.

15. ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642)

16. ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392)

17. ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365)

18. ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220)

19. ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813)

20. ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ.

21. ಪೈ ವಿಹಾರ್, ಆನಂದರಾವ್ ವೃತ್ತ

22. ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ.

23. ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ


Information by http://bisilahani.blogspot.com

ತನಗೂ ಈ ಕೃತ್ಯಗಳಿಗೂ ಸಂಬಂಧವಿಲ್ಲದಂತೆ ಕುಂತವನು ಭವ್ಯ ಭಾರತದ ಅತಿ ಹೇತ್ಲಾಂಡಿ ಪ್ರಧಾನಿ ಡಾ|ಮನಮೋಹನ್ ಸಿಂಗ್..!

  ಹಿಂದಿನ ಬರಹದಲ್ಲಿ ರಾಮದೇವ್ ಬಾಬಾ ಈ ಸತ್ಯಾಗ್ರಹದ ನಂತರ ಪೊಲಿಟಿಕಲಿ ಸ್ಟ್ರಾಂಗ್ ಆಗಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದೆ. ಬಹುತೇಕ ಹಾಗೆಯೇ ಆಗಿದೆ. ಸುಖಾ ಸುಮ್ಮನೆ ಕೇಂದ್ರ ಸರ್ಕಾರ ತನ್ನ ಕಾಲಮೇಲೆ, ತಲೆಮೇಲೆ, ಹಣೆಬರಹದ ಮೇಲೆ ಚಪ್ಪಡಿ ಕಲ್ಲು ಎಳೆದುಕೊಂಡಿದೆ.

Manamohan singh

Manamohan Singh - Courtesy Topnews.in

ಮಾನವೀಯ ಮೌಲ್ಯ ಇಟ್ಟುಕೊಂಡ ಯಾವ ವ್ಯಕ್ತಿಯೂ ಕೂಡಾ ಬಾಬಾ ಮತ್ತು ಅವರ ಸಂಗಡಿಗರ ಮೇಲಿನ ರಾತ್ರಿ ಧಾಳಿಯನ್ನ ಸಮರ್ಥಿಸಲಿಕ್ಕೆ ಸಾಧ್ಯವಿಲ್ಲ, ಕಾಂಗೇಸ್ಸೊಂದನ್ನು ಬಿಟ್ಟು..!  ಬಾಬಾ ರಾಮದೇವ್ ಗೆ ಭಾರೀ ಅನುಕಂಪದ ಅಲೆಯನ್ನ ಸೃಷ್ಟಿಸಿಕೊಡುವಲ್ಲಿ ಕೇಂದ್ರ ಸರ್ಕಾರದ ಪಾತ್ರ ಹಿರಿದು. ಏನೋ ಮಾಡಲು ಹೋಗಿ ಚಡ್ಡಿಯಲ್ಲಿ ಹುಳ ಬಿಟ್ಟುಕೊಂಡು ಕಡಿಸಿಕೊಳ್ಳುತ್ತಿರುವ ಅನುಭವ ಕೇಂದ್ರ ಸರ್ಕಾರಕ್ಕೆ ಮತ್ತು ಕಾಂಗ್ರೇಸ್ ಗೆ. ರಾತ್ರೋ ರಾತ್ರಿ ಮಹಿಳೆಯರು, ಮಕ್ಕಳು ಮತ್ತು ವಯಸ್ಸಾದ ಹಿರಿಯ ನಾಗರೀಕರಿರುವ ಸಭಾಂಗಣಕ್ಕೆ ನುಗ್ಗಿ ಹಲ್ಲೆ, ಲಾಠಿ ಬೀಸೋದು ಇದು ಯಾವ ಜಮಾನ ಅನ್ನೋದು ಅನುಮಾನ ಬರುತ್ತೆ. ಶಾಂತಿಯುತ ಸಭೆಗೆ ಪೊಲೀಸರನ್ನ ನುಗ್ಗಿಸಿ, ಅಶ್ರು ವಾಯು ಸೆಲ್ ಗಳನ್ನ ಸಿಡಿಸುವುದನ್ನ ಕಂಡಾಗ ಕಾರ್ಗಿಲ್ ಯುದ್ಧ ಕಣದಲ್ಲಿ ಯೋಧರು ಶೆಲ್ ಧಾಳಿ ನೆಡೆಸುವುದು ನೆನಪಿಗೆ ಬಂತು. ಆದರೆ, ತನ್ನದೇ ದೇಶದ ಮುಗ್ಧ ಪ್ರಜೆಗಳ ಮೇಲೆ ಅಪ್ರಚೋದಿತ ಧಾಳಿ ಮಾಡುವ ಸರ್ಕಾರ ಮುಂದೆ ಎಂದಿಗೂ ಪ್ರಜೆಗಳ ನಂಬಿಕೆಗಳನ್ನ ಗಳಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ.

   

Ram dev baba satyagraha - Midnight arrest

Ram dev baba satyagraha - Crushed by Center govt - Image courtesy - Deccan Herald

ಯಾವ ಪೊಲೀಸ್ ಆಯುಕ್ತನೂ ಇದನ್ನ ಸಮರ್ಥಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ. ರಾಮದೇವ್ ಬಾಬಾ ಬರೀ ಯೋಗ ಕ್ಲಾಸ್ ನಡೆಸಲಿಕ್ಕೆ ಅನುಮತಿ ತೆಗೆದುಕೊಂಡರು. ಸತ್ಯಾಗ್ರಹ ಮಾಡಲಿಕ್ಕಲ್ಲ. ಆಯ್ತು. ಮಾಧ್ಯಮಗಳ ಮೂಲಕ ಅವರನ್ನ ಜಂತರ್ ಮಂತರ್ ಗೆ ತೆರಳಿ ಅಂತಾ ಮನವಿ ಮಾಡಬಹುದಿತ್ತಲ್ಲ? ನೋಟಿಸ್ ಕೊಡಬಹುದಿತ್ತಲ್ಲ? ಕಾನೂನು ಪ್ರಕಾರ ಸರಿಯಲ್ಲ ಅನ್ನಬಹುದಿತ್ತಲ್ಲ? ಇವ್ಯಾವನ್ನೂ ಮಾಡದೇ ತನ್ನ ರಾಜಕೀಯ ಕಾರಣಗಳಿಗೋಸ್ಕರ ಬಾಬಾ ಮತ್ತು ಸಾವಿರಾರು ಜನರನ್ನ ಎತ್ತಂಗಡಿ ಮಾಡಿಸಿದ್ದು ಜಲಿಯನ್ ವಾಲಾಬಾಗ್ ನ ಜನರಲ್ ಡಯರ್ ನ ಬರ್ಬರತೆಗೆ ಸಮ.

Soniya gandhi

Soniya Gandhi - Image courtesy - nilacharal.com


    ಬೆಳ್ಳಂ ಬೆಳಗ್ಗೆ ದಿಗ್ವಿಜಯ್ ಸಿಂಗ್ ಎಂಬ ಅರೆ ಹುಚ್ಚ, ಅವಕಾಶವಾದಿ ರಾಜಕಾರಣಿ ಈ ಪೊಲೀಸರ ಹಲ್ಲೆಯನ್ನ, ಲಾಠಿ ಬೀಸಿದ್ದನ್ನ ಸಮರ್ಥಿಸಿಕೊಳ್ಳುತ್ತಿರುವುದನ್ನ ನೆನಪಿಸಿಕೊಂಡರೆ ಹೇಸಿಗೆ ಹುಟ್ಟಿಸುತ್ತದೆ. ಇಂಥಾ ರಾಜಕಾರಣಿಗಳನ್ನ ಈ ಪ್ರಜಾಪ್ರಭುತ್ವ ಇನ್ನೂ ಉಳಿಸಿದೆಯಲ್ಲಾ ಅಂತಾ ಪ್ರಜಾಪ್ರಭುತ್ವದ ಬಗ್ಗೆ ಸಿಟ್ಟೂ ಹುಟ್ಟುತ್ತದೆ. ಮತಾಂಧ ಲಾಡೆನ್ ನ್ನ “ಲಾಡೆನ್ ಜೀ” ಅಂತಾನೆ. ಬಾಬಾ ರಾಮದೇವನನ್ನ “ಥಗ್”, “ಚೀಟ್” ಅಂತಾನೆ. ಈ ಮೋಸಗಾರನ ಮಡಿಲಲ್ಲೇ ತಾನೇ ಪ್ರಣಬ್ ಮುಖರ್ಜಿ, ಕಪಿಲ್ ಸಿಬಲ್ ಎಂಬ ಮುಂದಿನ ಸಾಲಿನ ಕಾಂಗ್ರೇಸ್ ನಾಯಕರು ವಾರಗಟ್ಟಲೇ ಇದ್ದುದು? ಮೋಸಗಾರನ ಜೊತೆ “ಡೀಲ್” ಮಾಡಿಕೊಳ್ಳುವ ಕೇಂದ್ರ ಸರ್ಕಾರ ಮೋಸಗಾರನಲ್ಲವಾ?

Ram dev baba addressing press conference after reaching Dehradun

Ram dev baba addressing press conference after reaching Dehradun - Image courtesy news24online.com

ಇದೆಲ್ಲಾ ಒಂದೆಡೆ ಬೆಳಗ್ಗೆ ನಡೆಯುತ್ತಿದ್ದರೆ, ತನಗೂ ಈ ಕೃತ್ಯಗಳಿಗೂ ಸಂಬಂಧವಿಲ್ಲದಂತೆ ಸೋನಿಯಾ ಮೇಡಂ ಆರ್ಡರ್ ಗಾಗಿ ಕಾದು ಕುಳಿತವನು ಭವ್ಯ ಭಾರತದ ಅತಿ ಹೇತ್ಲಾಂಡಿ ಪ್ರಧಾನಿ ಡಾ|ಮನಮೋಹನ್ ಸಿಂಗ್..! ಸಿಖ್ ಧರ್ಮಕ್ಕೇ ಅವಮಾನ ಈ ಮನಮೋಹನ ಸಿಂಗ್. ಸಿಖ್ಖರೆಂದರೆ ಧೈರ್ಯ, ನಿಷ್ಟುರತೆ, ಪ್ರಾಮಾಣಿಕತೆ ಇವೆಲ್ಲವುಗಳ ಸಾಕಾರ ಮೂರ್ತಿಗಳು. ಸಿಖ್ಖ್ ಧರ್ಮಕ್ಕೇ ಅವಮಾನ ಈತನಂತೆ ಇರುವವರು. ಕೆಲಸಕ್ಕೆ ಬಾರದ ವ್ಯಕ್ತಿಯನ್ನ “ಒಳ್ಳೆಯವನು” ಅಂತಾ ಪೂಜಿಸಲಿಕ್ಕೆ ನಮಗೇನೂ ಹುಚ್ಚಿಡಿದಿಲ್ಲ. ಆರ್ಥಿಕ ತಜ್ಞ, ಅಭಿವೃದ್ಧಿಯ ಹರಿಕಾರ, ಜಾಗತೀಕರಣದ ಬೇರು ನೆಟ್ಟಾತ ಎಲ್ಲ ಸರಿ. ಆದರೆ, ಪ್ರಧಾನಿಯಾಗಿ ಅಟ್ಟರ್ ಫ್ಲಾಪ್. ಇಂಥಾ ಬಾಯಿ ಸತ್ತ ಪ್ರಧಾನಿಯನ್ನ ಪಡೆದದ್ದು ಭಾರತದ ದುರ್ದೈವ. ಅದಕ್ಕೇ ಬಹುವಚನ ಬೇಡವೆನಿಸಿದೆ.

    ಇನ್ನು “ಟೈಮ್ಸ್ ನೌ” ಚಾನಲ್ ಗೆ ಜಲಿಯನ್ ವಾಲಾಬಾಗ್ ಚಿತ್ರಣ ನೆನಪಾಗುವುದಿಲ್ಲ. ಬ್ಲೂ ಸ್ಟಾರ್ ಆಪರೇಷನ್ ನೆನಪಾಗುತ್ತೆ..! ರಾಮದೇವ್ ಬಾಬಾನನ್ನ ಹೊತ್ತೊಯ್ದು ಮತ್ತೆ ಡೆಹರಾಡೂನ್ ಗೆ ಬಿಟ್ಟು ಬಂದ ದಿನ ಎಲ್ಲ ಮಾಧ್ಯಮಗಳಲ್ಲಿ ಬಾಬಾ ಮೇಲಿನ ಹಲ್ಲೆ ಬಗ್ಗೆ ಚರ್ಚೆ. ಆ ದಿನ ಎಲ್ಲ ಮಾಧ್ಯಮಗಳಿಗೂ ಈ ಸನ್ನಿವೇಸವನ್ನ ಬೇರೆ ಬೇರೆ ಡೈಮೆನ್ಷನ್ ಗಳಲ್ಲಿ ನೋಡುವ ತವಕ. ಟೈಮ್ಸ್ ನೌ ಚಾನಲ್ ನಲ್ಲಿ ಸಂಜೆ ಬ್ಲೂ ಸ್ಟಾರ್ ಆಪರೇಶನ್ ಬಗ್ಗೆ ಒಂದು ಕಾರ್ಯ ಕ್ರಮ ಪ್ರಸಾರವಾಯಿತು. ಎತ್ತಣ ಬಾಬಾ ಮೇಲಿನ ಹಲ್ಲೆ ಎತ್ತಣ ಬ್ಲೂಸ್ಟಾರು? ಇಲ್ಲಿ ಒಂದು ಸೂಕ್ಷ್ಮ ವಿಷಯವನ್ನ ಗಮನಿಸಬೇಕು.

೧. ಬ್ಲೂ ಸ್ಟಾರ್ ಆಪರೇಶನ್ ನಡೆದದ್ದು ಪ್ರತ್ಯೇಕತೆಯನ್ನ ಹತ್ತಿಕ್ಕಲಿಕ್ಕೆ. ಧಾರ್ಮಿಕವಾಗಿ ಅದು ಅನ್ ಎಥಿಕಲ್. ಪೊಲಿಟಿಕಲಿ ಕರಕ್ಟ್. ಇಡೀ ಪಂಜಾಬೇ ಸಿಡಿದು ಹೋಗುವಂತಿದ್ದ ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ದಿಟ್ಟ ನಿರ್ಧಾರ ತೆಗೆದುಕೊಂಡರು. ಇಲ್ಲಿ ಬಹುತೇಕ ಜನ ವ್ಯವಸ್ಥೆಯನ್ನ ಬೆಂಬಲಿಸುತ್ತಾರೆ. ಪ್ರತಿಭಟನಾಕಾರರನ್ನಾಗಲೀ ಪ್ರತ್ಯೇಕತಾವಾದಿಗಳನ್ನಾಗಲೀ ಅಲ್ಲ.
೨. ಜನರಲ್ ಡಯರ್ ಅಮೃತಸರದ ಬಳಿಯ ಜಲಿಯನ್ ವಾಲಾಬಾಗ್ ನಲ್ಲಿ ೧೯೧೯ರಲ್ಲಿ ಒಂದು enclosed area ನಲ್ಲಿ ಶಾಂತಿಯುತ ಸಭೆ ನಡೆಸುತ್ತಿದ್ದ ಜನರ ಗುಂಪಿನ ಮೇಲೆ ಏಕಾಏಕಿ ಗುಂಡಿನ ಧಾಳಿ ನಡೆಸಿದ. ಒಂದು ವ್ಯವಸ್ಥಿತ, ಅಮಾನವೀಯ, ಬರ್ಬರ ಧಾಳಿ ನಡೆಸಿ ಜನರ ಸಾವು ನೋವಿಗೆ ಕಾರಣನಾದ. ಇದು ವ್ಯವಸ್ಥೆ ನಡೆಸಿದ ಕೃತ್ಯ. ಇದನ್ನ ಯಾವ ಭಾರತೀಯನೂ ಬೆಂಬಲಿಸುವುದಿಲ್ಲ.

ಇನ್ನು ಟೈಮ್ಸ್ ನೌ ಜನರಿಗೆ ನೆನಪಿಸಿದ್ದು ಅಮಾನವೀಯತೆಯನ್ನಲ್ಲ. System ಒಂದು ತುರ್ತು ಅಗತ್ಯಕ್ಕೆ ಕೈಗೊಂಡ ಕ್ರಮವನ್ನ ಮಾಧ್ಯಮವೊಂದು ಸಮರ್ಥಿಸುವಂತಿತ್ತು.

ಇದೆಲ್ಲಾ ಆಯ್ತು ಸರಿ. ಜನರೆಲ್ಲಾ ಜನರಲ್ ಡಯರನನ್ನ, ಜಲಿಯನ್ ವಾಲಾಬಾಗ್ ನ ನೆನಪಿಸಿಕೊಂಡರೆ, ಮಾಧ್ಯಮಗಳಿಗೆ ಬ್ಲೂ ಸ್ಟಾರ್ ಆಪರೇಶನ್ ನೆನಪಾದದ್ದು ದುರಂತ.

ಮುಂದೇನು?
೧. ರಾಮದೇವ್ ಬಾಬಾ ಹೋರಾಟವನ್ನ ಇನ್ನೂ ತೀವ್ರಗೊಳಿಸಬಹುದು.
೨. ರಾಮದೇವ್ ಬಾಬಾ ಮೇಲೆ ಇಲ್ಲ ಸಲ್ಲದ ಕೇಸುಗಳನ್ನ ಜಡಿದು ಒಂದೆಡೆ ಕೂಡಿಸಲಿಕ್ಕೆ, ಇಮೇಜ್ ಹಾಳು ಮಾಡಲಿಕ್ಕೆ, ತಾನು ಪ್ರತಿಪಾದಿಸಿದ “ಮೋಸಗಾರ” ಇಮೇಜಿಗೆ ಹೊಸ ಹೊಸ ಕಾರಣಗಳನ್ನ ಹುಡುಕಬಹುದು. ರಾಮದೇವ್ ಬಾಬಾನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಸರ್ವ ಪ್ರಯತ್ನಗಳನ್ನೂ ಮಾಡುತ್ತದೆ.
೩. ಬಾಬಾನ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಪ್ರತಿಯಾಗಿ ಇನ್ನೋಂದು ಆಂದೋಲನ ನಡೆಸಬಹುದು. ಆದರೆ, ಸಧ್ಯಕ್ಕೆ ಅಂಥಾ ಪ್ರಬಲ ಕಾರಣಗಳ್ಯಾವೂ ಪ್ರತಿ ಆಂದೋಲನಕ್ಕೆ ಕಾರಣಗಳಿಲ್ಲ. ಅಂಥದ್ದನ್ನ ಮಾಡಿದರೂ ಜನ ಚಪ್ಪಲಿ ಕೈಗೆತ್ತಿಕೊಳ್ತಾರೆ.
೪. ಇದರ ಜೊತೆ ಅಣ್ಣಾ ಹಜಾರೆ ಕೂಡಾ ಪ್ರತಿಭಟನೆ, ಸತ್ಯಾಗ್ರಹ ಶುರು ಮಾಡಿಕೊಂಡರೆ, ಅವರನ್ನ ಏನಾದ್ರೂ ಮಾಡಿ ತಡೆದು,  ಜನಲೋಕಪಾಲ್ ಬಿಲ್ ನ ಡ್ರಾಫ್ಟ್ ಕಾಪಿ ತನಗೆ ಬೇಕಾಗಿರುವಂತೆ ರೂಪಿಸಿಕೊಳ್ಳುತ್ತದೆ.
೫. ಇದೆಲ್ಲಾ ನಡೆಯುವಷ್ಟರ ಹೊತ್ತಿಗೆ ರಾಮದೇವ್ ಬಾಬಾನ ಹಣ ಕಪ್ಪು ಹಣದಿಂದಲೇ ಬಂದದ್ದು ಅನ್ನೋ ವಾದವನ್ನ ಮಂಡಿಸಲಿಕ್ಕೆ ಶುರು ಮಾಡುತ್ತದೆ. ಹಾಗಾಗಿ ಕಪ್ಪು ಹಣದ ವಿರುದ್ಧ ಹೋರಾಡಲಿಕ್ಕೆ ನೈತಿಕ ಹಕ್ಕಿಲ್ಲ ಅನ್ನುತ್ತದೆ.
೬. ರಾಮದೇವ ಬಾಬಾನನ್ನ ಯಾವುದಾದರೂ ಹಗರಣಗಳಲ್ಲಿ ಸಿಲುಕಿಸಲಿಕ್ಕೆ ಶತಾಯುಗತಾಯ ಪ್ರಯತ್ನ ನಡೆಸುತ್ತದೆ. ನಿತ್ಯಾನಂದನ ರಾಸಲೀಲೆ ಥರದವಾದರೆ, ಜನ ಮನರಂಜನೆ ಕೂಡಾ ಅನುಭವಿಸುತ್ತಾರೆ ಮತ್ತು ಕಪ್ಪು ಹಣ, ಭ್ರಷ್ಟಾಚಾರವನ್ನೂ ಮರೆತುಬಿಡುತ್ತಾರೆ.
೭. ಈಗ ವಿಶ್ವಾಸ ಕಳೆದುಕೊಂಡಿರುವುದು ಕೇಂದ್ರ ಸರಕಾರ. ಹಾಗಾಗಿ ಕೇಂದ್ರ ಸರಕಾರ ಏನೇ ಗಿಮಿಕ್ ಗಳನ್ನ ಮಾಡಲಿಕ್ಕೆ ಹೊರಟರೂ ಜನ ಅನುಮಾನದಿಂದ ನೋಡುತ್ತರೆ, ಜೊತೆಗೆ ರಾಮದೇವ ಬಾಬಾನ ಮೇಲಿನ ಅನುಕಂಪದ ಅಲೆ ಕೂಡಾ ಸಾಥ್ ಕೊಡುತ್ತದೆ.