ಅಕ್ಟೋಬರ್ ತಿಂಗಳಿಂದಾ ‘ಕುರ್ಚಿ ವ್ಯವಹಾರ’ ನೆಡೆದೇ ಇದೆ. ನಮ್ಮ ನಗೆ ನಗಾರಿಯವರು ಚೆಡ್ಯೂರಪ್ಪ, ಜೋಕುಮಾರಸ್ವಾಮಿಯರನ್ನ ಏಪ್ರಿಲ್ ಒಂದರಂದು ಆರಾಧ್ಯ ದೈವಗಳನ್ನಾಗಿಸಿದ್ದಾರೆ. ಅವರು ಕುರ್ಚಿ ಜಗಳಗಳ ಬಗ್ಗೆ ಬರೆದಿದ್ದರು. ಹಾಗಾಗಿ ಒಂದು ಜೋಕು ನೆನಪಿಗೆ ಬರ್ತಾ ಇದೆ. ಬಹುಷಃ ಕೇಳಿರಲಾರಿರಿ ಎಂಬ ನಂಬುಗೆಯೊಂದಿಗೆ…
ಒಮ್ಮೆ ಬಸ್ಸು ಹತ್ತುವಾಗ ತುಂಬಾ ರಷ್ ಇತ್ತು. ಹೊರಗಿನಿಂದ ಹತ್ತುವ ವ್ಯಕ್ತಿಗಳು ಕರ್ಚೀಫು, ಟವಲ್ಲುಗಳನ್ನು ಹಾಕಿ ತಮ್ಮ ಸೀಟ್ಗಳನ್ನು ಭದ್ರಪಡಿಸಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಹೀಗೇ ತಾನೆ ಅನಾಮತ್ತಾಗಿ, ಅನಧೀಕೃತವಾಗಿ ರಿಸರ್ವೇಷನ್ನು ಮಾಡೋಡು..?
ಹೀಗೆ ಕರ್ಚೀಫು ಹಾಕಿ ಒಳಗೆ ತನ್ನ ಸೀಟನ್ನ ಒಬ್ಬಾತ ರಿಸರ್ವ್ ಮಾಡಿದಿನಿ ಅಂತ ಅಂದುಕೊಂದು ಒಳಗೆ ಹೋಗಿ ನೋಡಿದರೆ, ಒಬ್ಬ ಆಸಾಮಿ ಕರ್ಚೀಫು ಸರಿಸಿ ಕೂತಿದ್ದಾನೆ. ನಾನು ಕರ್ಚೀಫು ಮೊದಲು ಹಾಕಿದೀನಿ ಈ ಸೀಟು ನಂದು ಅಂದನಂತೆ ಕರ್ಚೀಫು ಹಾಕಿದವ. ಅದಕ್ಕೆ ಕುಂತಿರುವ ವ್ಯಕ್ತಿ ಏನಂದ ಗೊತ್ತಾ? ವಿಧಾನಸೌಧದ ಮೇಲೆ ನಾನೂ ಕರ್ಚೀಫು ಹಾಕ್ತೀನಿ. ವಿಧಾನ ಸೌಧ ನಂದಾಗುತ್ತಾ ಅಂದನಂತೆ. ತರ್ಕ ಅಂದರೆ ಹಿಂಗಿರಬೇಕಲ್ಲವಾ..!
0 responses so far ↓
There are no comments yet...Kick things off by filling out the form below.