ಉದಯವಾಣಿ ಹುಬ್ಬಳ್ಳಿ ಆವೃತ್ತಿ ಬಗ್ಗೆ ಉದಯವಾಣಿ ಗ್ರೂಪ್ ಎಡಿಟರ್ ರವಿ ಹೆಗಡೆಗೆ

ನನ್ನ ವಿರುದ್ಧ ಆರೋಪಗಳಿಗೆ ಇಗೋ ಸಮಾರೋಪ

ಈ ವರ್ಷ ಸಂಕ್ರಾಂತಿ ನನ್ನ ವೃತ್ತಿ ಜೀವನದಲ್ಲೂ ಸಂಕ್ರಾಂತಿಯ ಗಳಿಗೆ. ಆ ವೇಳೆಯಲ್ಲಿ ನಾನು ದಿಢೀರನೆ ಸುವರ್ಣ ನ್ಯೂಸ್ ಬಿಡುವ ನಿರ್ಧಾರ ಕೈಗೊಂಡಿದ್ದು, ಕನ್ನಡದ ಎರಡು ಪ್ರಮುಖ ಪತ್ರಿಕೆಗಳಲ್ಲಿ ಯಾವುದನ್ನು ಸೇರಲಿ ಎಂಬ ಆಯ್ಕೆಯ ಮುಂದೆ ಕುಳಿತು ಹಗಲೂ ರಾತ್ರಿ ಯೋಚಿಸಿದ್ದು, ನನ್ನ ಸಹೋದ್ಯೋಗಿಗಳೋಡನೆ ಈ ಕುರಿತು ಚರ್ಚಿಸಿದ್ದು, ನಂತರ ಉದಯವಾಣಿಯ ಗ್ರೂಪ್ ಎಡಿಟರ್ ಆದದ್ದು, ಯಾವುದೇ ತಯಾರಿ ಇಲ್ಲದೇ ಮೂರು ಬಜೆಟ್, ವಿಶ್ವಕಪ್ ಕ್ರಿಕೆಟ್ ಮುಂತಾದ ಪ್ರಮುಖ ದಿನಗಳ ಪತ್ರಿಕೆ ರೂಪಿಸಿದ್ದು, ದಿಢೀರನೆ ಹುಬ್ಬಳ್ಳಿ ಆವೃತ್ತಿ ಆರಂಭಿಸಿದ್ದು, ಪತ್ರಿಕೆಯ ಮುಂದಿನ 5 ವರ್ಷಗಳ ನೀಲನಕ್ಷೆ ರೂಪಿಸಲು ಕೈಹಾಕಿದ್ದು, ಮಂಗಳೂರು ಆವೃತ್ತಿಯ ವೃತ್ತಿಸೂಕ್ಷ್ಮಗಳನ್ನು ಅಭ್ಯಸಿಸಿದ್ದು, ಬೆಂಗಳೂರು ಆವೃತ್ತಿಯ ಮೂಲಸೌಕರ್ಯ ಹೆಚ್ಚಿಸಿಕೊಳ್ಳಲು ಅವಿರತ ಪ್ರಯತ್ನಿಸಿದ್ದು…. ಹೀಗೆ ಒಂದು ದಿನವೂ ಬಿಡುವಿಲ್ಲದೇ ಕಳೆದ 5 ತಿಂಗಳು ಅದು ಹೇಗೆ ಉರುಳಿತೋ ಗೊತ್ತಾಗುತ್ತಲೇ ಇಲ್ಲ.

ಉದಯವಾಣಿ ಹುಬ್ಬಳ್ಳಿ ಆವೃತ್ತಿ ಬಗ್ಗೆ ಉದಯವಾಣಿ ಗ್ರೂಪ್ ಎಡಿಟರ್ ರವಿ ಹೆಗಡೆ ಬರೆದಿದ್ದಾರೆ. ಅವರಿಗೆ ಪ್ರತಿಕ್ರಿಯೆ.

ಮೊದಲನೆಯದಾಗಿ ಉದಯವಾಣಿಯಲ್ಲಿ ಚಲನಶೀಲತೆಗೆ ಕೈಹಾಕಿರುವ ನಿಮಗೆ ಶುಭವಾಗಲಿ.

ಎರಡನೆಯದಾಗಿ ಮೀಡಿಯಾ strategy ಗಳ ಬಗ್ಗೆ ಬರೆದಿದ್ದೀರಿ. ಹಾಗಾಗಿ ಒಂದು ವಿಷಯವನ್ನ ಪ್ರಸ್ತಾಪಿಸಲಿಕ್ಕೆ ಇಚ್ಷಿಸುತ್ತೇನೆ. ಮೊನ್ನೆ ಮೊನ್ನೆ ಹುಬ್ಬಳ್ಳಿ ಆವೃತ್ತಿ ಬಿಡುಗಡೆ ಮಾಡಿದ್ದೀರಿ. ನೋಡಿದ್ದೇನೆ. ಕನ್ನಡದ ಬೇರಾವ ಪತ್ರಿಕೆಯಲ್ಲೂ ಇರದ ಪ್ರಿಂಟ್ ಕ್ವಾಲಿಟಿ ಉದಯವಾಣಿಗೆ ಇದೆ. ಹುಬ್ಬಳ್ಳಿ ಆವೃತ್ತಿ ಮೂಲಕ ಉದಯವಾಣಿ “ಕರಾವಳಿ” ಬ್ರಾಂಡಿನಿಂದ ಆಚೆಗೆ ಯೋಚಿಸಿದೆ. ಆದರೆ, ಹುಬ್ಬಳ್ಳಿ ಆವೃತ್ತಿಯಲ್ಲಿ ನಾನು ಗಮನಿಸಿದಂತೆ ಈ ಕಡೆಯ ಭಾಷಾ ಬಳಕೆ ನಡೆದಿಲ್ಲ. ಅಟ್ಲೀಸ್ಟ್ ದಿನಕ್ಕೆ ಒಂದೆರಡು ಪುಟ್ಟ ಲೇಖನಗಳು ಹುಬ್ಬಳ್ಳಿ ಭಾಷೆಯಲ್ಲಿ ಬರಬೇಕು. ಇದು ಜನರಿಗೆ ಆಪ್ತ ಮನೋಭಾವವನ್ನ ನೀಡಲು ಶಕ್ತವಾಗುತ್ತದೆ.

ಇನ್ನು ಉದಯವಾಣಿಯ ಅಂಕಣಕಾರರು ಕರಾವಳಿ ಭಾಗದವರು. ಇಲ್ಲಿನ ಜನರಿಗೆ ಫಾದರ್ ಅಂದ್ರೆ ತಿಳಿಯಲ್ಲ. ಇಲ್ಲಿನ ಪ್ರಿಯಾರಿಟಿಗಳೇ ಬೇರೆ. ಪ್ರಿಯಾರಿಟಿಗಳನ್ನ ಆಧರಿಸಿ ಮೀಡಿಯಾ strategy ಗಳು ಅನುಷ್ಟಾನಗೊಳ್ಳಬೇಕು. ನಮ್ ಕಡೆ ಪಾಟೀಲ, ಕಟ್ಟಿಮನಿ, ಅಂಗಡಿ ಮುಂತಾದ ಹೆಸರುಗಳು ಚಾಲ್ತಿಯಲ್ಲಿರುತ್ತವೆ. ಹಾಗಾಗಿ ಉತ್ತರ ಕರ್ನಾಟಕದ ಕಡೆಯ ಮಂದಿಯನ್ನೂ ಅಂಕಣಕಾರಿಕೆಗೆ ಸೇರಿಸಿಕೊಂಡರೆ ಈ ಕಡೆಯ ಪತ್ರಿಕೆ ಅನ್ನೋ ಭಾವ ಮೂಡಿಸಲಿಕ್ಕೆ ಸಹಕಾರಿಯಾಗಬಹುದು.

ಮೂರನೆಯದಾಗಿ, ಹುಬ್ಬಳ್ಳಿಯಲ್ಲಿ ಪ್ರಮುಖ ಬೀದಿಗಳಲ್ಲಿ, ಚನ್ನಮ್ಮನ ವೃತ್ತದಲ್ಲಿ ಹಾಕಿರುವ ಅಡ್ವರ್ಟೈಸ್ಮೆಂಟ್ ಗಳಲ್ಲಿ ಸ್ಥಳೀಯ ಸುದ್ದಿಗೆ ಪ್ರಾಧಾನ್ಯ ಕೊಡುವುದಾಗಿ ಹೇಳಿದ್ದೀರಿ. ಆದ್ರೆ, ಸ್ಥಳೀಯ ನಾಡಿ ಮಿಡಿತ ಅರಿಯುವಲ್ಲಿ ಇನ್ನೂ ಪ್ರಾವೀಣ್ಯ ಬೇಕಿದೆ ಅನ್ನಿಸುತ್ತದೆ. ಈಗಲೂ ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕ ಬಿಟ್ಟರೆ ಬೇರೆಯದಕ್ಕೆ ಪ್ರತಿಷ್ಠೆ ಕಡಿಮೆ. ಇದಕ್ಕೆ ಕಾರಣಗಳೂ ಇವೆ. ಅಜ್ಜ ಮುತ್ತಜ್ಜನ ಕಾಲದಿಂದ ಮನೆಗೆ ಬರುತ್ತಿದ್ದ ಪೇಪರ್ ನ್ನ ಬದಲಿಸಲಿಕ್ಕೆ ಮನಸ್ಸಾಗಿಲ್ಲ. ಆದ್ರೆ, ಸಂಯುಕ್ತ ಕರ್ನಾಟಕದ ಹಳೇ ತುಕ್ಕು ಹಿಡಿದ ನೀತಿಗಳು, strategy ಗಳು ಒಂದು ದಿನ ಪೇಪರ್ರನ್ನೇ ಮುಳುಗಿಸಿದರೆ ಆಶ್ಚರ್ಯವಿಲ್ಲ. ಆ ದಿನಗಳೂ ದೂರವಿಲ್ಲ.

ಹೊಸತನವನ್ನ ಬಯಸುವ ಯುವ ಜನತೆ ವಿಜಯ ಕರ್ನಾಟಕ, ಕನ್ನಡ ಪ್ರಭದತ್ತ ಮುಖ ಮಾಡಿದ್ದಾರೆ. ಅಂಥಾ ಯುವಜನತೆಯನ್ನ ಉದಯವಾಣಿಯತ್ತಲೂ ಒಲಿಸಿಕೊಳ್ಳಬೇಕಿದೆ. ಇದೆಲ್ಲದಕ್ಕೂ ಸ್ಥಳೀಯ ಭಾಷಾ ಸೊಗಡು ಸೇರಿದರೆ ಪತ್ರಿಕೆ ಉತ್ತರ ಕರ್ನಾಟಕದಲ್ಲೂ ಭದ್ರವಾಗಿ ಕಾಲೂರಬಹುದು.

ಶುಭವಾಗಲಿ.

One thought on “ಉದಯವಾಣಿ ಹುಬ್ಬಳ್ಳಿ ಆವೃತ್ತಿ ಬಗ್ಗೆ ಉದಯವಾಣಿ ಗ್ರೂಪ್ ಎಡಿಟರ್ ರವಿ ಹೆಗಡೆಗೆ

  1. >> ಸಂಯುಕ್ತ ಕರ್ನಾಟಕದ ಹಳೇ ತುಕ್ಕು ಹಿಡಿದ ನೀತಿಗಳು, strategy ಗಳು
    ಸಂಯುಕ್ತ ಕರ್ನಾಟಕ ಮತ್ತು strategy ಗಳು.. ಎತ್ತಣಿಂದೆತ್ತ ಸಂಬಂಧವಯ್ಯಾ ? ಸಂಕ ಉದ್ಧಾರವಾಗುವುದು ಕಷ್ಟ..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s