೧೩ ಜುಲೈ ೨೦೧೧
ಮುಂಬೈ ಮೇಲೆ ಉಗ್ರರ ಸರಣಿ ಬಾಂಬ್ ಧಾಳಿ
ಸತ್ತವರು (ಇಲ್ಲಿಯವರೆಗು) : ೨೧ ಜನ
ಅರ್ಧ ಸತ್ತವರು/ ಮುಕ್ಕಾಲು ಭಾಗ ಸತ್ತವರು (ಇಲ್ಲಿಯವರೆಗೂ) : ೧೪೦ ಜನ
ಪಟ್ಟಿ ಮುಂದುವರಿಯುತ್ತದೆ. ನಿರೀಕ್ಷಿಸಿ.
ಬಾಂಬ್ ಸ್ಫೋಟವಾದಾಗಲೇ ತಕ್ಷಣವೇ ಸತ್ತುಬಿಡೋದೇ ಒಳ್ಳೆಯದು. ಆಮೇಲೆ ಆಸ್ಪತ್ರೆಲಿ ತಿಂಗಳು ಕಾಲ ಇದ್ದು ಸತ್ರೆ ಪತ್ರಿಕೇಲೂ ಸುದ್ದಿಯಾಗಲ್ಲ, ಟೀವಿಲೂ ಸುದ್ದಿಯಾಗಲ್ಲ. ಜನರ ಅನುಕಂಪವೂ ಸಿಗಲ್ಲ. ಎಂಥಾ ಬೇನಾಮಿ, ಬೇವರ್ಸಿ ಸಾವು..! ಸಾಯೋರ್ ಇದ್ರೆ ಬೇಗ ಅಟ್ಲೀಸ್ಟ್ ಬೇಗನಾದ್ರೂ ಸತ್ ಬಿಡ್ಲಿ. ಟೀವಿನಲ್ಲಾದ್ರೂ ಬರುತ್ತೆ. ಇಲ್ಲಾಂದ್ರೆ, ಅವರ ಸಾವಿಗೂ ಬೆಲೆಯಿರಲ್ಲ..! ಜನರ ಜೀವಕ್ಕೆ ಬೆಲೆ ಎಲ್ಲಿದೆ ಹೇಳಿ?
ಅತಿ ದೊಡ್ಡ ಪ್ರಜಾಪ್ರಭುತ್ವ ನಮ್ಮದೇ. ಬಹುಶಃ ಅತಿ ಕೆಟ್ಟ ಪ್ರಜಾಪ್ರಭುತ್ವ ಮತ್ತು ಅತಿ ಭ್ರಷ್ಟ ರಾಜಕಾರಣಿಗಳು ಇರೋದೂ ನಮ್ ದೇಶದಲ್ಲೇ.
ಈ ಎಲ್ಲದಕ್ಕೂ ಕಾರಣ ಮುಸ್ಲೀಮರನ್ನ ಓಲೈಸುವುದಕ್ಕಾಗಿ ನಮ್ಮ ರಾಜಕಾರಣಿಗಳು ರೂಪಿಸುವ ನೀತಿಗಳು. ಎಲ್ಲ ಮುಸ್ಲೀಮರು ಕೆಟ್ಟವರಲ್ಲ. ಆದರೆ, ಇಂಥವರಿಂದ ಒಳ್ಳೆಯವರ ಸಾಧನೆಗಳೂ ಧರ್ಮದ ಕಾರಣಗಳಿಗಾಗಿ ಮಸುಕಾಗಬಾರದು.
ರಾಜಕೀಯ ಪರಿಣಾಮಗಳು ಏನಾಗಬಹುದು? ಮೋದಿಯ ಹಾದಿ ಸುಗಮವಾಗಬಹುದು
. ರಾಹುಲ ಗಾಂಧಿ ಎಂದೂ ಉಗ್ರವಾದದ ವಿರುದ್ಧ ಉಗ್ರವಾಗಿ ಮಾತಾಡಿಲ್ಲ. ಯುವ ಜನರಿಗೆ ರಾಹುಲಗಾಂಧಿಯಂಥಾ ಎಳಸುಗಳಿಗಿಂತ ಗಟ್ಟಿಯಾಗಿ ನಿಲ್ಲುವ ಮೋದಿ ಇಷ್ಟವಾಗಬಹುದು. ಉಗ್ರವಾದವನ್ನ ಮಟ್ಟ ಹಾಕಲಿಕ್ಕೆ ಮೋದಿಯೇ ಸರ್ವಶಕ್ತ ಎಂಬ ಮನೋಭಾವ ಮೂಡಬಹುದು. ಕಾಂಗ್ರೇಸ್ ವಿರೋಧಿ ಅಲೆ ಜೋರಾಗಬಹುದು. ಇವೆಲ್ಲದರ ಮಧ್ಯೆ ಒಂದಿಷ್ಟು ಜನರನ್ನ ಹಿಡಿದು ಇವರೇ ಸಂಚುಗಾರರು ಅಂತ ಪೊಲಿಸರು ನಾಕ್ ದಿವ್ಸ ತಿರ್ಗಾಡ್ಕಂಡ್ ಅಡ್ಡಾಡ್ತಾರೆ. ಆಮೇಲೆ ನೀವೂ ಮರೀತೀರ ಬಾಂಬ್ ಎಲ್ಲಿ ಸ್ಫೋಟ ಆಗಿತ್ತು ಅಂತಾ. ನಾವೂ ಮರೀತೀವಿ.
ಮಾಧ್ಯಮಗಳು ನಾಕ್ ದಿವ್ಸ ವರದಿ ಮಾಡ್ತವೆ. ಐದನೇ ದಿವ್ಸಕ್ಕೆ ಯಾನಾ ಗುಪ್ತಾ ಗುಪ್ತಾಂಗಗಳಿಗೆ ಪ್ಯಾಂಟಿ ಹಾಕಿಕೊಂಡು ಬಂದಿದ್ದು ಸುದ್ದಿಯಾಗುತ್ತೆ. ಇಲ್ಲವೇ ಐಶ್ವರ್ಯ ಯಾವ್ ಮಗು ಹಡೀತಾಳೇ ಅನ್ನೊದ್ ಸುದ್ದಿ. ಸರ್ಕಾರಗಳು ಬಾಂಬ್ ಸ್ಫೋಟದಲ್ಲಿ ಮಡಿದವರಿಗೆ, ಅಂಗಾಂಗ ಕಳೆದುಕೊಂಡವರಿಗೆ ಪರಿಹಾರ “ಘೋಷಣೆ “ಮಾಡ್ತವೆ. ಕೊಡಬೇಕು ಅಂತಾ ಏನೂ ರೂಲ್ಸ್ ಇಲ್ಲ.
ಹಿಂಗೇ ಆಗುತ್ತೆ ಅಂತಾ ಕನಸಂತೂ ಬಿದ್ದಿಲ್ಲ. ಎಚ್ಚರವಾಗೇ ಇದ್ದೇನೆ. ಆದರೆ, ಹಿಂದೆ ನಡೆದ ಬಾಂಬುಗಳ ಸದ್ದುಗಳನ್ನ ಕೇಳಿದಾಗಲೆಲ್ಲಾ, ಟಿವಿ ಪತ್ರಿಕೆಗಳನ್ನ, ಹೇತ್ಲಾಂಡಿ ಪ್ರಧಾನಿಯನ್ನ ನೋಡಿದಾಗಲೆಲ್ಲಾ ಇದಕ್ಕಿಂತ ಇನ್ನೇನೂ ಘಟಿಸಲಿಕ್ಕೆ ಉಳಿದಿಲ್ಲ ಅನ್ನಿಸದೇ ಇರುತ್ತದೆಯೇ?
ಹತಾಶೆ ಬಿಟ್ಟು ಇನ್ನೇನೂ ಹೇಳಕ್ ಉಳಿದಿಲ್ಲ.



