ಐಪಿಎಲ್ 5 – ಈ ದುರಂತಕ್ಕೆ ಏನ್ ಅಂತೀರಿ?

IPL session 5 logo ಆತ ಎಂಜಿನಿಯರಿಂಗ್ ಕಾಲೇಜು ಹುಡುಗ. ಕಾಲೇಜು ಫೀಸ್ ಕಟ್ಟು ಅಂತಾ 50,000 ಕೊಟ್ಟರು. ಆದರೆ, ಆತ ಐಪಿಎಲ್ ಬೆಟ್ಟಿಂಗ್ ಆಡಿ ಐವತ್ತನ್ನ ಲಕ್ಷ ಮಾಡಿಕೊಂಡರೆ ಹೇಗೆ ಅಂತಾ ಯೋಚಿಸಿ, ಬೆಟ್ಟಿಂಗೆ ಕಟ್ಟಿದ. ಪರಿಣಾಮ? ಅವರಪ್ಪ ಕಷ್ಟಪಟ್ಟು ವರ್ಷವೆಲ್ಲ ದುಡಿದ 50,000 ಯಾವನದೋ ಪಾಲಾಯಿತು. ಅವರ ಅಪ್ಪ ಅಮ್ಮ ಈಗ ಗೋಳಾಡ್ತಾ ಇದಾರೆ. ಇದು ನಾನು ಕಣ್ಣಾರೆ ಕಂಡ ಸತ್ಯ ಘಟನೆ.

ಒಂದೇ ಒಂದು ಬಾರಿ ಹುಡುಗರ ಪಿಜಿಗಳು, ಕಾಲೇಜು ಬಾಯ್ಸ್ ಹಾಸ್ಟೆಲ್ ಗಳು, ನಾಲ್ಕು ಜನ ಸೇರುವ ವೃತ್ತಗಳು ಎಲ್ಲವನ್ನ ಒಮ್ಮೆ ಅಡ್ಡಾಡಿ ಬನ್ನಿ. ನಿಮಿಷ ನಿಮಿಷಕ್ಕೂ ಬೆಟ್ಟಿಂಗ್. ಐನೂರಕ್ಕೆ D ಅನ್ನೋ ಕೋಡ್ ವರ್ಡ್. ಸಾವಿರಕ್ಕೆ S ಅನ್ನೋ ಕೋಡ್ ವರ್ಡ್. 1 D ಅಂದ್ರೆ 500. 2 D ಅಂದ್ರೆ 1000, 1 S ಅಂದ್ರೆ 1000. 2 S ಅಂದ್ರೆ 2000 ಹಿಂಗೇ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದರಲ್ಲೂ ಫ್ಯಾನ್ಸಿ ಅನ್ನೋ ಆಟ ಬೇರೆ ಇದೆ. ಪ್ರತಿ ಬಾಲ್ ಮೇಲೆ ಬೆಟ್ಟಿಂಗ್. ಈ ಬಾಲ್ ಫೋರ್ ಹೋಗುತ್ತೆ. ಬೆಟ್ ಕಟ್ತೀಯಾ? ಹಳ್ಳಿಯಲ್ಲಿ ಕೂತಿರುವ ಬುಕ್ಕಿಯ ದನಿ. ಈತ ಇಲ್ಲಿಂದ 2 S ಅಂದ್ರೆ ಎರಡು ಸಾವಿರ ಬೆಟ್ಟಿಂಗ್. ಬಂತು ಅಂದ್ರೆ 4000. ಹೋಯ್ತು ಅಂದ್ರೆ 2000 ಖತಂ. ಸುಮ್ನೆ ಒಂದು ಆಟ ಆಡಿ ರೊಕ್ಕ ಮಾಡಿಕೊಂಡು ಹೋಗುವಂತಿಲ್ಲ. ಸೀಸನ್ ಮುಗಿಯುವವರೆಗೂ ಆಡಬೇಕು. ಹೊಸಬರಾದರೆ  50,000 ಠೇವಣಿ ಕೂಡಾ ಇಡಬೇಕು. ಅಮೇಲೆ ಆಟ.

ಇಷ್ಟೆಲ್ಲಾ ಮಾತುಕತೆಗಳು ನಾಲ್ಕೈದು ಸೆಕೆಂಡುಗಳಲ್ಲಿ ಆಗುವಂಥದ್ದು. ಬುಕ್ಕಿಗಳು ಜಾಸ್ತಿ ಹೊತ್ತು ಮಾತಾಡಲ್ಲ. ನಿರ್ಧರಿಸಲು ನಿಮಿಷಗಟ್ಲೇ ಟೈಮ್ ಕೂಡಾ ಕೊಡಲ್ಲ. ಬರೀ Guess work ಮೇಲೆ ಹೌದು ಇಲ್ಲಾ ಅನ್ಬೇಕು.

ಹದಿನೈದು ವರ್ಷಗಳ ಇಂಡಿಯಾ ಪಾಕಿಸ್ತಾನ ಮ್ಯಾಚು ನಡೆಯಬೇಕಾದ್ರೆ ಹೊರಗಡೆ ನಾವೂ ಒಬ್ನೂ ಅಡ್ಡಾಡ್ತಿರಲಿಲ್ಲ. ಅಲ್ಲಿದ್ದುದು ಒಂದು ರೀತಿಯ ದೇಶಾಭಿಮಾನ ಅನ್ನಿ, ರಾಷ್ಟ್ರೀಯತೆ ಅನ್ನಿ. ಏನಾದ್ರು ಅನ್ನಿ. ಆದ್ರೆ, ಐಪಿಎಲ್ ಬಂದಾದ ಮೇಲೆ ಇಲ್ಲಿರೋದು ಯಾವನು ಫೋರ್ ಹೊಡೆದರು ಯಾವನು ಸಿಕ್ಸ್ ಹೊಡೆದರು ಕುಣಿಯುವ ಚೀರ್ ಗರ್ಲ್ ಮನಸ್ಥಿತಿಯದ್ದು. ಯಾವನಿಗೆ ಏನಾದ್ರೆ ನಮಿಗೇನು? ನಮಿಗೆ ಖುಷಿ ಬೇಕು ಅಷ್ಟೇ. ಅದು ಯಾವ ಮೂಲದಿಂದ ಬಂದರೂ ಸರಿಯೇ. ಯಾರನ್ನ ತುಳಿದು ಬಂದರೂ ಸರಿಯೇ. ಈ ಮನಸ್ಥಿತಿಗೆ ಯಾವುದೇ ತಾತ್ವಿಕ ತಳಹದಿ ಇಲ್ಲ.

ಪ್ರತಿ ಟೀಮಿನೋರೋ ಪ್ರತಿ ಆಟಗಾರನನ್ನ ಕೋಟಿಗಟ್ಲೇ ಎಣಿಸಿ ಎಣಿಸಿ ಹರಾಜು ಹಾಕಿದರು. ಜನ ಆವಾಗ್ಲೇ ಜೂಜಿ(ಬೀದಿ?)ಗೆ ಬಿದ್ದದ್ದು. ಯಾರ್ ಯಾರೋ ರೊಕ್ಕ ಮಾಡ್ಕತಾರೆ. ನಾವ್ ಯಾಕ್ ಮಾಡ್ಕಬಾರ್ದು? ಅನ್ನೋ ಮನಸ್ಥಿತಿ ಶುರುವಾಗಿದ್ದೇ ಆವಾಗ. ಲಾಸ್ ವೆಗಾಸ್ ಮನಸ್ಥಿತಿ. ಜೂಜು ಮೋಜು ಇವೆರಡೇ ಜೀವನ.

ಇದೆಲ್ಲ ಸರಿ. ಬಾಯ್ಸ್ ಹಾಸ್ಟೆಲ್ ಗಳ ಮತ್ತು ಪಿಜಿ ಗಳಲ್ಲಿ ಹುಡುಗರಿಗೆ ಆಡಲಿಕ್ಕೆ ರೊಕ್ಕವಾದ್ರೂ ಎಲ್ಲಿಂದ ಬರಬೇಕು? ಮನೆ ಖಾಲಿ ಮಾಡಿ ಅಡ್ವಾನ್ಸು ತಗಂಡು ಯಾರದೋ ಮನೆಯಲ್ಲಿ ಸಾಮಾನು ಬಿಸಾಕಿ ಒಂದು ಕೊಂಪೆಗೆ ರೂಮನ್ನ ಶಿಫ್ಟು ಮಾಡಿ ಅ ರೊಕ್ಕದಲ್ಲಿ ಐಪಿಎಲ್ ಬೆಟ್ಟಿಂಗ್ ಆಡಿದ ವ್ಯಕ್ತಿಗಳನ್ನೂ ಕಣ್ಣಾರೆ ಕಂಡಿದ್ದೇನೆ. ಅಪ್ಪ ಕೊಡಿಸಿದ ಆಂಡ್ರಾಯ್ಡ್ ಮೊಬೈಲು, ವಾಚು, ಪಾಕೆಟ್ ಮನಿ, ಯಾವನ ಹತ್ರ ಇಸ್ಕೊಂಡ ಸಾಲ ಎಲ್ಲವೂ ಐಪಿಎಲ್ ಬೆಟ್ಟಿಂಗ್ ಪಾಲು.

ಮಲ್ಯ ಕುದುರೆ ಬಾಲಕ್ಕೆ ರೊಕ್ಕ ಕಟ್ತಾನೆ. ಅವನ ಮಗ ಕಂಡ ಕಂಡೋರ ಜೊತೆ ರಾತ್ರಿ ಮಲಗ್ತಾನೆ. ಸಿನಿ ತಾರೆಯರು ಇವರೆಲ್ಲರ ತಾಳಕ್ಕೆ ತಕ್ಕಂತೆ ಕುಣೀತಾರೆ. ಆದ್ರೆ, ಯಾವಾನಾದ್ರೂ ಬೀದಿಗ್ ಬಂದಿದ್ ಕೇಳಿದೀರಾ? ಕಿಂಗ್ ಫಿಷರ್ ಮುಳುಗುತ್ತೆ. 7000 ಕೋಟಿ  ಸಾಲ ಅಂತಾರೆ. ಮಲ್ಯ ಎಂದಾದ್ರೂ ಮನೆ ಮಾರೋ ಸ್ಥಿತಿಗೆ, ಏನಾದ್ರೂ ಅಡ ಇಡೋ ಸ್ಥಿತಿಗೆ ಬಂದಿದಾನಾ? ಬರಲ್ಲ ಸ್ವಾಮೀ. ಇವೇ ಹುಡುಗರು ರೊಕ್ಕ ಕಟ್ಟಿ ಮೋಸ ಹೋಗೋದು. ಓದೋದು ಬರಿಯೋದು ಬಿಟ್ಟು ಐಪಿಎಲ್ ಬೆಟ್ಟಿಂಗ್ ಅಂತಾ ಜೀವನವನ್ನ ಹಾಳು ಮಾಡ್ಕಂತಿರೋದು. ಎಲ್ಲಿ ರೊಕ್ಕ ಝಣ ಝಣ ಅನ್ನುತ್ತದೋ ಅದರ ಜೊತೆ ಕ್ರೈಮ್ ಕೂಡಾ ಜೊತೆಗೇ ಬರುತ್ತೆ. ಐಪಿಎಲ್ ಬೆಟ್ಟಿಂಗ್ ಕಟ್ಟಿ ರೊಕ್ಕ ಕೊಡದೇ ಹೋದರೆ ಬುಕ್ಕಿಗಳು ಏನ್ ಸುಮ್ನೇ ಬಿಡ್ತಾರಾ? ರೌಡಿಗಳು, ರಿಯಲ್ ಎಸ್ಟೇಟ್ ಕುಳಗಳು ಎಲ್ಲರೂ ಇದರಲ್ಲಿ ಶಾಮೀಲಾಗಿರುವ ಶಂಕೆ ಇದ್ದೇ ಇರುತ್ತದೆ. ರೊಕ್ಕ ಕೊಡದೇ ಇರೋ ಹುಡುಗರು ಒದೆ ತಿಂತಾರೆ.

ಅಪಾಯಕಾರಿ, ಆಘಾತಕಾರಿ ಮತ್ತು ಚಿಂತನೆಗೀಡುಮಾಡುವ ಸಂಗತಿ ಇದು. ಎಲ್ಲಿಗೆ ಬಂತು ಭಾರತ ಭಾರತದ ಅವನತಿಯ ಆರಂಭ ಶುರುವಾಗಿದೆಯಾ? ಐಪಿಎಲ್ ನಲ್ಲಿನ ಜನ ಕೆಟ್ಟೋರ್ ಇರ್ಬೋದು. ಕ್ರಿಕೆಟ್ ನಿಷೇಧಿಸಬೇಕೇಕೆ ಅನ್ನೋರು ಸ್ವಲ್ಪ ಕೇಳಿಸ್ಕತೀರಾ?

ಅಣ್ಣಾ ಬಾಂಡ್: ಅನುಲೋಮ ವಿಲೋಮ ಅನುವಾದೀಯ ದೋಷ..!

Anna Bond - Kannada film

Anna bond

Anna Bond ನ ಕನ್ನಡದಲ್ಲಿ ಹೆಂಗ್ ಬರೀತೀರಿ? : ಅಣ್ಣಾ ಬಾಂಡ್.

ನಮ್ ಹುಬ್ಳೀ ಭಾಷ್ಯಾಗ Anna Bond? : ಅಣ್ಣಾ ಬಾಂಡ
“ಆಣ್ಣಾ ಬಾಂಡ” ನ ಇಂಗ್ಳೀಷ್ ನಾಗ ಹೆಂಗ್ ಬರೀತೀರಿ? : ANNA BONDA
ANNA BONDA ನ ಕನ್ನಡದಾಗ ಹೆಂಗ್ ಬರೀತೀರಿ? : ಅಣ್ಣಾ ಬೋಂಡ :-)

This is called ಅನುಲೋಮ ವಿಲೋಮ ಅನುವಾದೀಯ ದೋಷ ;-)

ಬಿಸಿ ಬಿಸಿ ಬೋಂಡಾ ಕುರಿತ ಅವರ ವ್ಯಂಗ್ಯ ಚಿತ್ರವೊಂದು ಇಲ್ಲಿದೆ.
ನಮ್ಮ ಪ್ರೀತಿಯ ಸತೀಶ್ ಆಚಾರ್ಯರವರಿಂದ

ANNA BONDA

ANNA BONDA – Cartoon by Satish Acharya

ಯಡ್ಡಿ ಅಭಿನಂದನಾ ಸಮಾವೇಶ : ಚೆಡ್ಡಿ ಪತ್ರಿಕೆಯ ಯಡ್ಡಿ ಚೇಲಾಗಿರಿ..?

Yaddyurappa banner - Abhinandana samarambha - hubli -  march 11, 2012

Yaddyurappa banner - Abhinandana samarambha - hubli - march 11, 2012

ಯಡಿಯೂರಪ್ಪನ ಗುಣಗಾನದ ಪುರವಣಿ, ಯಡ್ಯೂರಪ್ಪ ಸಂಪೂರ್ಣ ಆರೋಪ ಮುಕ್ತ ಅಂತಾ ದೊಡ್ಡದಾಗಿ ಸಾರಿ, ಮುಖಪುಟವನ್ನೇ ಆತನಿಗಾಗಿ ಮೀಸಲಿಡುವುದು, ಬೇರೆ ಯಾವ ಸುದ್ದಿಗೂ ಪ್ರಾಧಾನ್ಯ ನೀಡದೇ ಇರುವುದು ಇವೆಲ್ಲಾ ಏನನ್ನ ತೋರಿಸುತ್ತವೆ? ಯಡ್ಯೂರಪ್ಪನ ಮೇಲೆ ಇನ್ನೂ ೮ ಕೇಸುಗಳು ಬಾಕಿ ಇರುವಾಗ ಅದರ ಪ್ರಸ್ತಾಪವೇ ಇಲ್ಲ. ಇದೇನಾ ರಾ(ಭ್ರ)ಷ್ಟ್ರಜಾಗೃತಿ?

ಇದು ಹುಬ್ಬಳ್ಳಿಯಿಂದ ಸಾಕ್ಷಾತ್ ವರದಿ.
ಹೊಸ ದಿಗಂತ ತನ್ನನ್ನ ತಾನು ಅಕ್ಷರಶಃ “ಮಾರಿಕೊಂಡಿದೆ”. ಯಡಿಯೂರಪ್ಪನ ಸಮಾವೇಶದಲ್ಲಿ ಪಾಂಪ್ಲೇಟ್‍ಗಳಂತೆ ಹಂಚಲಿಕ್ಕೆ ಹೊಸ ದಿಗಂತದ ಕಟ್ಟುಗಳನ್ನ ತಂದಿದ್ದಾರೆ. ವಿಭಾಗೀಯ ಪೀಠದ ತೀರ್ಪು ಅಂತಾ ಮುಖಪುಟದ ಅರ್ಧ ಭಾಗವನ್ನ ಮೀಸಲಿಟ್ಟಿದೆ. ಕೊನೆಯ ರಕ್ಷಾಪುಟವನ್ನ ಪೂರಾ ವಿನಿಯೋಗಿಸಿದೆ. ಕೋರ್ಟು, ಕಟ್ಟಳೆಗಳು, ಆ ಆರ್ಟಿಕಲ್ಲು,

Main page of Hosa diganta

Main page of Hosa diganta

ಈ clause ಇದೂ ಅಂತಾ “ವಿಭಾಗೀಯ ಪೀಠದ ತೀರ್ಪಿನ ಸಾರಾಂಶ” ಅಂತಾ ಸಾರಿದೆ. ಸಾರಾಂಶವನ್ನೇ ಒಂದೂವರೆ ಪುಟ ಪ್ರಕಟಿಸುವ ಆಸ್ಥೆ..! ಜೊತೆಗೆ ಯಡ್ಡಿಯನ್ನ ಹಾಡಿ ಹೊಗಳುವ ಒಂದು ವಿಶೇಷ ಪುರವಣಿ.  ಬೇರೆಲ್ಲಾ ಪತ್ರಿಕೆಗಳಲ್ಲಿ

Hosa diganta bundles

Hosa diganta bundles for free distribution

ಅಖಿಲೇಶ್ ಮುಖ್ಯಮಂತ್ರಿಯಾದ ಸುದ್ದಿ ಮುಖಪುಟದಲ್ಲಿ ರಾರಾಜಿಸಿದ್ದರೆ, ಹೊಸ ದಿಗಂತದಲ್ಲಿ ಅದರ ಸುಳಿವೇ ಇಲ್ಲ, ಮುಖಪುಟದಲ್ಲಿ.

Abhinandana samavesha - Hubli - Yaddyurappa

Vedike

ಮೊದಲ ಪುಟದ ವರದಿಯಲ್ಲಿ ೪೦ ಸಾವಿರ ಜನರಿಗೆ ಆಸನ ವ್ಯವಸ್ಥೆ ಅಂತ ಬರೆದಿದೆ. ಬರೆದ ವರದಿಗಾರನ ಹೆಸರು ನೋಡಿದೆ. ಪ್ರಕಟವಾಗಿಲ್ಲ. ಈ ಎಲ್ಲಾ ವರದಿಗಳಲ್ಲಿ ಬರೀ ಉತ್ಪ್ರೇಕ್ಷೆಯ ಘಮಲು ಇರುತ್ತೆ ಅಂತಾ ಗೊತ್ತಿತ್ತು. ಎಷ್ಟು ಕುರ್ಚಿಗಳ ಸಾಲುಗಳಿವೆ ಅಂತಾ ಎಣಿಸಿದೆ. ಮುಖ್ಯ ವೇದಿಕೆಯ ಎಡಭಾಗದಲ್ಲಿ ಮತ್ತು ಬಲಭಾಗದಲ್ಲಿ ಸುಮಾರು ೬೦ರಂತೆ ಕಂಬ ಸಾಲುಗಳಿವೆ. ಅಲ್ಲಿಗೆ ಒಟ್ಟು ೧೨೦ ಕಂಬ ಸಾಲುಗಳಾದವು. ಅಡ್ಡ ಸಾಲುಗಳು ಸುಮಾರು 120 ಇವೆ. ಅಲ್ಲಿಗೆ 120*120=14,400 ಕುರ್ಚಿಗಳಾದವು. ವೇದಿಕೆಯ ಮುಂದೆ ಒಂದು ಹತ್ತು ಸಾಲುಗಳ ಲೆಕ್ಕವನ್ನ ಹಿಡಿದರೆ, 1 ಸಾವಿರ ಹೆಚ್ಚಿಗೆ ಸೇರಿಸಿ. ಅಲ್ಲಿಗೆ 15,400 ಕುರ್ಚಿಗಳು. ಇನ್ನು ನೆಹರು ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿ ವಿಷಯ. ಅಲ್ಲೆಲ್ಲಾ ರಣ ರಣ ಬಿಸಿಲು ಸುರಿಯುತ್ತಿದೆ. ಅಲ್ಲಿರುವ ನೆರಳಿನಲ್ಲಿ ಒಂದಿಷ್ಟು ಮಂದಿ ಕೂತರೂ 2000ಕ್ಕಿಂತ ಜಾಸ್ತಿ ಆಗಲ್ಲ. ನೆನಪಿರಲಿ. ಕುರ್ಚಿ ಹಾಕಿರುವೆಡೆಯಲ್ಲಿ ಮಾತ್ರ ಪೆಂಡಾಲ್ ಇದೆ. ಹುಬ್ಬಳ್ಳಿ ಈಗಿರುವ ಬಿಸಿಲಿಗೆ ಹೊರಗೆ ನಿಂತು ಭಾಷಣ ಕೇಳಲಿಕ್ಕಂತೂ ಸಾಧ್ಯವೇ ಇಲ್ಲ. ಅದು ಹೇಗೆ ೪೦ ಸಾವಿರ ಅಂತಾ ಒಬ್ಬ ಪತ್ರಕರ್ತ ಬರೀತಾನೆ? 15ಸಾವಿರ ಕುರ್ಚಿಗಳು ಮತ್ತು 2 ಸಾವಿರ ಪ್ರೇಕ್ಷಕ ಗ್ಯಾಲರಿ ಸೇರಿದರೆ, 17-18 ಸಾವಿರ ಮಂದಿ ಕೂರಲಿಕ್ಕೆ ವ್ಯವಸ್ಥೆ ಆಯಿತು. 40 ಸಾವಿರ ಜನಕ್ಕೆ ಆಸನ ವ್ಯವಸ್ಥೆ ಅನ್ನೋದು ಬರೀ ಉತ್ಪ್ರೇಕ್ಷೆ ಮತ್ತು ಚೇಲಾಗಿರಿ. ಅಷ್ಟೂ ಜ್ಞಾನ ಬೇಡವಾ? ಭಾರತೀಯ ಸಂಸ್ಕೃತಿಯ ಬಗ್ಗೆ ಮಾತೆತ್ತಿದರೆ ನಮ್ಮ ಇತಿಹಾಸದಲ್ಲಿ ಈಗಿನ ಎಲ್ಲ ಅಡ್ವಾನ್ಸ್ ‍ಡ್ ಮ್ಯಾಥೆಮ್ಯಾಟಿಕ್ಸ್ ನಮ್ಮ ವೇದಕಾಲದ ವೇದಗಣಿತದಲ್ಲೇ ಇತ್ತು ಅಂತಾ ಕೊಚ್ಚಿಕೊಳ್ಳುವ ಇವರು, ಸಧ್ಯಕ್ಕೆ ವೇದಗಣಿತ ಬೇಡ,  ಗಣಿತ ಕಲಿಯಲಿ ಸಾಕು..!

Hosa diganta, last page, March 11, 2012

Hosa diganta, last page, March 11, 2012

ಲಕ್ಷ ಜನ ಸೇರುವ ನಿರೀಕ್ಷೆ ಅಂತಾ ಬರೆದಿದೆ. 15 ಸಾವಿರ ಚೇರುಗಳಲ್ಲಿ , ಒಂದೊಂದು ಕುರ್ಚಿಗೆ 6 ಜನರನ್ನ ಕೂರಿಸುವ ಹೊಸ ವ್ಯವಸ್ಥೆಯೇನಾದರೂ ಇದೆಯಾ? ಹೊಸ ದಿಗಂತ ಮತ್ತು ಯಡ್ಡಿ ಪಟಾಲಂ ನ ಕೇಳಬೇಕು..!

ಇವಿಷ್ಟೂ ರಾಷ್ಟ್ರ‍ ಜಾಗೃತಿಯ ಪತ್ರಿಕ, ಹೊಸ ದಿಗಂತದ “ರಾಷ್ಟ್ರ ಜಾಗೃತಿ”ಯ ಝಲಕುಗಳು..!

ಮಾಸ್ತರಿಕೆಗೆ ದೀಡು : ಕಂಡದ್ದೇನು ಕಾಣದ್ದೇನು? – ಭಾಗ ೧

ನನ್ನ ಪಂಚ್ ಲೈನ್ ಬ್ಲಾಗಿನಲ್ಲಿ ಪಂಚ್ ಲೈನುಗಳು ಸಾಂಗೋಪಾಂಗವಾಗಿ ಬರುತ್ತಿದ್ದವಾದರೂ, ಬರಹಗಳನ್ನ ಬರೆಯಲಿಕ್ಕೆ ಯಾಕೋ ಮನಸ್ಸು ಆಗಿರಲಿಲ್ಲ. ತಲೆಯಲ್ಲಿ ಯೋಚನೆಗಳು, ಯೋಜನೆಗಳು ಸಾಕಷ್ಟಿದ್ದರೂ ಬರಹಗಳಾಗಿ ಮೂಡಿರಲಿಲ್ಲ. ಇನ್ನು ಮೇಲೆ ನನ್ನ ಅಧ್ಯಾಪನ ವೃತ್ತಿಯ ಹಲವು ಮಜಲುಗಳನ್ನ ಬರಹಗಳಲ್ಲಿ ಕಂತುಗಳಲ್ಲಿ ಪ್ರಕಟಿಸುತ್ತೇನೆ.

ಮಾಸ್ತರಿಕೆ ಚಾಲೂ ಮಾಡಿ ದೀಡ್ ವರ್ಷ ಕಳದಾವು. ಕಂಡದ್ದೇನು ಕಾಣದ್ದೇನು ಅನ್ನೂದರ ಬಗ್ಗೆ ಸ್ವಾನುಸಂಧಾನ. ಒಂದು ಪ್ರಮುಖ ವಿಷಯ. “ದೀಡು” ಅನ್ನೋದು ಹಿಂದಿಯ “ಢೇಡ್” ಶಬ್ಧದ ಅಪಭ್ರಂಶ. ಅಂದ್ರೆ, ಒಂದೂವರೆ ಅಂತಾ ಅರ್ಥ. ಇಲ್ಲಿಗೆ ಹೊಸದಾಗಿ ಬಂದಾಗ ದೀಡು ಅನ್ನೋದು ಒಂದು ಮಜವಾದ ಶಬ್ಧವಾಗಿ ಕಂಡಿತ್ತು.

ಜಗತ್ತನ್ನೇ ಬದಲಾಯಿಸಿಬಿಡುತ್ತೀನೆಂಬ ಹುಚ್ಚು ಹಂಬಲ, ಹೇಳಿದ್ದನ್ನ ಗಮನವಿಟ್ಟು(ಬೇಕೋ ಬೇಡವೋ) ಕೇಳುವ ಜನ(ಅರ್ಥಾತ್ ವಿದ್ಯಾರ್ಥಿಗಳು), ಪ್ರಧಾನಮಂತ್ರಿಗಳಿಗೆ, ಮುಖ್ಯ ಮಂತ್ರಿಗಳಿಗೆ ಭಾಷಣ ಓದಲಿಕ್ಕೆ ಇರೋವಂಥಾ ಡಯಾಸು, ಕಾರಿಡಾರಿನಲ್ಲಿ – ಕ್ಯಾಂಪಸ್ ನಲ್ಲಿ ನಡೆದು ಹೋಗುತ್ತಿದ್ದರೆ ಹಫ್ತಾ ವಸೂಲಿಗಿಳಿದವರಿಗೆ ಹಫ್ತಾವನ್ನ ಕೇಳದೇ ಕೊಡುವಂತೆ ನಮಸ್ಕಾರಗಳು, ಕಾಲೇಜು ಬಸ್ಸಿನಲ್ಲಿ ಪ್ರತ್ಯೇಕ ಸ್ಟಾಫ್ ಸೀಟು, ಅದರಲ್ಲಿ ಯಾರಾದರೂ ಕೂತಿದ್ದರೆ ಎದ್ದೇಳಿಸಿ ಕೂರುವ ಗತ್ತು, ಸೌಲಭ್ಯ… ಇವೆಲ್ಲ ಮೊದಲ ನೋಟಕ್ಕೆ ಸಿಗುವ ಒಂದೂವರೆ ವರ್ಷದ ಹಿಂದಿನ ನಾಸ್ಟಾಲ್ಜಿಯಾ..!

ಹುಬ್ಬಳ್ಳಿಗೆ ಕಾಲಿಟ್ಟು ನಾಲ್ಕು ವರ್ಷಗಳು ಕಳೆಯುತ್ತಿವೆ. ಇಲ್ಲಿನ ಭಾಷೆ, ಊಟ, ಸಂಸ್ಕೃತಿ, ಪ್ರಧಾನತೆ, ಅಭಿರುಚಿ, ಹಾವಭಾವಗಳು, ವಿಶೇಷ ಬೈಗುಳಗಳು, ಗದ್ದಲಗಳು ಎಲ್ಲವೂ ಚಿರಪರಿಚಿತವಾಗುತ್ತಿವೆ. ಊರು ದಾವಣಗೆರೆಯಾದ್ದರಿಂದ ಹುಬ್ಬಳ್ಳಿಯ ಭಾಷೆಯನ್ನ ಕರಗತ ಮಾಡಿಕೊಳ್ಳುವುದು ಕಷ್ಟಸಾಧ್ಯವಾಗಲಿಲ್ಲ. ಹುಬ್ಬಳ್ಳಿ ಕಡೆಯ ಭಾಷೆ ಕನ್ನಡದ ಉಪಭಾಷೆಗಳಲ್ಲೊಂದು. ರಾಣಿಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟೆಯ ಭಾಷೆಗಳ ಸೊಗಡು ಒಂದು ರೀತಿಯಾದರೆ, ಬಿಜಾಪುರ, ಗುಲ್ಬರ್ಗ, ಬೀದರ್ ಕಡೆಯ ಭಾಷೆಗಳ ಸೊಗಡೇ ಬೇರೆ. ಹುಬ್ಬಳ್ಳಿಯಿಂದ ಒಂದೂವರೆ ತಾಸಿನ ಪ್ರಯಾಣದ ಬೆಳಗಾವಿ ಕಡೆಯ ಭಾಷೆಯ ಮರಾಠಿ ಮಿಶ್ರಿತ ಕನ್ನಡದ ಸೊಗಡೇ ಬೇರೆ. ಬಹುಮಟ್ಟಿಗೆ ಹುಬ್ಬಳ್ಳಿಯ accent ಕಲಿತುಕೊಂಡಿದ್ದೇನೆ. ಮಾತಾಡಿದರೆ, ಥೇಟ್ ಹುಬ್ಬಳ್ಳಿಯಾತನೇನೋ ಎಂಬಂತೆ ಮಾತು ಕಲಿತಿದ್ದೇನೆ.

ಉತ್ತರ ಕರ್ನಾಟಕದ ಹೆಬ್ಬಾಗಿಲೆಂದೇ ಪರಿಗಣಿಸಲ್ಪಡುವ ಹುಬ್ಬಳ್ಳಿಯ ಭಾಷೆ ಗಂಡು ಮೆಟ್ಟಿದ ಭಾಷೆ ಅಂತಲೇ ಕರೆಯಲ್ಪಡುತ್ತದೆ. ಹಾಗಾದ್ರೆ ಹೆಣ್ಣು ಮೆಟ್ಟಿದ ಭಾಷೆ ಯಾವುದು ಎಂಬ ಪ್ರಶ್ನೆ ಮನದಲ್ಲಿ ಸುಳಿದು ಹೋಗುತ್ತದೆ..! ಇನ್ನೊಂದು ವಿಚಿತ್ರವೆಂದರೆ, ಹುಬ್ಬಳ್ಳಿಯ ಬ್ರಾಂಡ್ ಅಂಬಾಸಿಡರ್ ಅಂತಾ ಪರಿಗಣಿಸುವುದಾದರೆ ಅದು ಕಿತ್ತೂರು ಚನ್ನಮ್ಮ. ಧಾರವಾಡದಿಂದ ಬೆಳಗಾವಿಗೆ ಹೋಗುವ ಧಾರಿಯಲ್ಲಿನ ಕಿತ್ತೂರಿನಾಕೆಯಾದರೂ, ಆಕೆ ಸಮಸ್ತ ಕನ್ನಡಿಗರ, ದೇಶಪ್ರೇಮಿಗಳ ಪ್ರತಿನಿಧಿ. ಹುಬ್ಬಳ್ಳಿಯ ಪ್ರಮುಖ ವರ್ತುಲಕ್ಕೆ(ಸರ್ಕಲ್ ಗೆ ನಮ್ಮ ಹುಬ್ಬಳ್ಳಿ ಕಡೆಗೆ ಇರೋ ಸುಂದರ ಕನ್ನಡ ಹೆಸರು) ಕಿತ್ತೂರು ರಾಣಿ ಚನ್ನಮ್ಮನ ಹೆಸರಿಡಲಾಗಿದೆ. ಇದರ ವಿಶೇಷತೆ ತಿಳಿಯಲೇ ಬೇಕು. ಸಾಮಾನ್ಯವಾಗಿ ಕುದುರೆಯ ಮೇಲೆ ಕುಳಿತಿರುವ ಬಸವೇಶ್ವರರ ಅಥವಾ ಇನ್ಯಾವುದೇ ರಾಜನ ಅಥವಾ ಮಹಾಪುರುಷರ ಮೂರ್ತಿಗಳನ್ನ ನೋಡಿದ್ದಕ್ಕೂ ಇಲ್ಲಿರುವ ಚನ್ನಮ್ಮ ವರ್ತುಳದ ಚನ್ನಮ್ಮನಿಗೂ ವ್ಯತ್ಯಾಸವಿದೆ. ಕೇವಲ ಹಿಂಭಾಗದ ಎರಡು ಕಾಲುಗಳ ಮೇಲೆ ಕುದುರೆ ಕೆನೆಯುತ್ತ ನಿಂತಿದೆ. ಅದರ ಮೇಲೆ ತೆರೆದ ಕತ್ತಿ ಹಿಡಿದ ಚನ್ನಮ್ಮ ಆಸೀನಳಾಗಿದ್ದಾಳೆ. ಪ್ರತಿ ಬಾರಿ ಈ ಸರ್ಕಲ್ಲನ್ನ ಸಿಟಿ ಬಸ್ಸು ಸುತ್ತು ಹಾಕುವಾಗಲೂ ಮನಸ್ಸು ಒಮ್ಮೆ ಚನ್ನಮ್ಮನ ಮೂರ್ತಿ ಕಟೆದ ಶಿಲ್ಪಿಯನ್ನ ನೆನೆಯುತ್ತದೆ. ಕುದುರೆಯ ಕೇವಲ ಎರಡು ಕಾಲುಗಳ ಮೇಲೆ ಇಡೀ ಭಾರವನ್ನ, ಗುರುತ್ವ ಕೇಂದ್ರವನ್ನ ಸರಿದೂಗಿಸುವುದು ಸವಾಲಿನ ಕೆಲಸ. ಎಷ್ಟೋ ಮೂರ್ತಿಗಳಲ್ಲಿ ನಾಲ್ಕೂ ಕಾಲಿನ ಮೇಲೆ ಕುದುರೆ ನಿಂತಿರುತ್ತದೆ. ಅದರ ಮೇಲೆ ಯಾರಾದರೂ ಮಹಾಪುರುಷರು ಕುಂತಿರುವ ಭಂಗಿಯಿರುತ್ತದೆ.

ಕಿತ್ತೂರು ಚನ್ನಮ್ಮ ವೃತ್ತದ ಇನ್ನೊಂದು ಪ್ರಮುಖ ವಿಶೇಷತೆ ಇದೆ. ಒಬ್ಬ ಎಂಜಿನಿಯರಾಗಿ ಇದನ್ನ ಗಮನಿಸಬೇಕು. ಈ ವೃತ್ತದಲ್ಲಿ ೬ ರಸ್ತೆಗಳು ಕೂಡುತ್ತವೆ. ಅದರಲ್ಲಿ ಎರಡು ರಾಷ್ಟ್ರ‍ೀಯ ಹೆದ್ದಾರಿಗಳು. ಯಾವುದೇ ಕಾರಣಕ್ಕೂ ಇಲ್ಲಿ ಟ್ರಾಫಿಕ್ ಜಾಮ್ ಆಗುವಂತಿಲ್ಲ. ಹೆದ್ದಾರಿಯ ವಾಹನಗಳನ್ನ ಜಾಸ್ತಿ ಹೊತ್ತು ತಡೆಹಿಡಿಯುವಂತಿಲ್ಲ. ಇದನ್ನ ಟ್ರಾಫಿಕ್ ಐಲ್ಯಾಂಡ್ ಅಂತಲೇ ಕರೀತಾರೆ. ಚನ್ನಮ್ಮ ವೃತ್ತದಲ್ಲಿ ಏನಾದರೂ ಪ್ರತಿಭಟನೆಗಳು, ಜಾಥಾಗಳು ನಡೆದರೆ ಹುಬ್ಬಳ್ಳಿ ಹಲವು ತಾಸುಗಳ ಕಾಲ ಸ್ಥಬ್ಧವಾಗಿಬಿಡುತ್ತದೆ. ಇದರ ಟ್ರಾಫಿಕ್ ಸಿಸ್ಟಮ್‍ನ್ನ ವಿನ್ಯಾಸಗೊಳಿಸುವುದು ಸುಲಭದ ಕೆಲಸವಾಗಿರಲಿಲ್ಲ. ಇದರ ಬಗ್ಗೆ ಎಂ.ಟೆಕ್ ನಲ್ಲಿ ನನ್ನ ಗುರುಗಳಾಗಿದ್ದ ಪ್ರೊ.ಬಿ.ಎಲ್.ದೇಸಾಯಿಯವರು Design constraints ಬಗ್ಗೆ ಹೇಳುತ್ತಿದ್ದರು. ವಾಹನಗಳ ಹರಿವನ್ನ ನಿಯಂತ್ರಿಸುವುದು, ಅವುಗಳಿಗೆ ಪರ್ಯಾಯ ಮಾರ್ಗ ತೋರಿಸಿ ಟ್ರಾಫಿಕ್ಕನ್ನ ಕಡಿಮೆ ಮಾಡುವುದು ಇವೆಲ್ಲವೂ ಸಾಮಾನ್ಯ ಕೆಲಸವೇನಲ್ಲ. ಇದು ಹಲವು ಬಾರಿ ಕಗ್ಗಂಟಾಗಿತ್ತಂತೆ. ಹಾಗಾಗಿ ಚನ್ನಮ್ಮ ಸರ್ಕಲ್ಲಿನ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಭಾರತದ ಮಟ್ಟದಲ್ಲಿ Design contest ಏರ್ಪಡಿಸಿದ್ದರಂತೆ. ಅದರಲ್ಲಿ ಆಯ್ಕೆಯಾದದ್ದನ್ನ ಈಗ ಉಳಿಸಿಕೊಂಡಿದ್ದಾರೆ.

ಮಾಸ್ತರೇನೋ ಆದೆ. ಆದರೆ, ಮಾಸ್ತರಿಕೆಗೆ ಒಗ್ಗಿಕೊಳ್ಳಲಿಕ್ಕೆ ಸ್ವಲ್ಪ ಸಮಯ ಬೇಕು. ಚಿಕ್ಕವನಿದ್ದಾಗಿನಿಂದಲೂ ಸ್ಟೇಜಿನ ಮೇಲೆ ಅದೂ ಇದೂ ಕಾರ್ಯಕ್ರಮ ಕೊಡುತ್ತಿದ್ದುದರಿಂದ ನನಗೇನೂ ಸಭಾ ಕಂಪನ, ಜನರೊಂದಿಗೆ ಬೆರೆಯದಿರುವಿಕೆ ಇವ್ಯಾವೂ ಇಲ್ಲ. ಆದರೂ ಹೊಸ ವ್ಯಕ್ತಿಗಳೊಂದಿಗೆ ನಮ್ಮ ಮಾತು, ಹಾವಭಾವ ಇವೆಲ್ಲವನ್ನೂ tune ಮಾಡಿಕೊಳ್ಳಬೇಕೆಂದರೆ ಸ್ವಲ್ಪ ಟೈಮು ಹಿಡಿಯುತ್ತದೆ. ಮೆನ್ ಆರ್ ಫ್ರಂ ಮಾರ್ಸ್, ವಿಮೆನ್ ಆರ್ ಫ್ರಂ ವೀನಸ್ ನಂಥ, ಡೇಲ್ ಕಾರ್ನೆಗಿಯ ಹೌ ಟು ಮೇಕ್ ಫ್ರೆಂಡ್ಸ್ ಅಂಡ್ ಇನ್ ಫ್ಲುಯೆಂನ್ಸ್ ಪೀಪಲ್ ಥರದ ರಿಲೇಷನ್‍ಷಿಪ್ ಮ್ಯಾನೇಜ್‍ಮೆಂಟ್ ಬುಕ್ಕುಗಳನ್ನ ಓದಿದ್ದರಿಂದ ೬೦-೭೦ ಮಂದಿಯನ್ನ ನಿಭಾಯಿಸುವುದು ಕಷ್ಟವೆನಿಸಲಿಲ್ಲ.

ಮುಂಬೈ ಸರಣಿ ಸ್ಫೋಟ : ಹಿನ್ನೋಟವಲ್ಲ. ಒಂದು “ಮುನ್ನೋಟ”

೧೩ ಜುಲೈ ೨೦೧೧

ಮುಂಬೈ ಮೇಲೆ ಉಗ್ರರ ಸರಣಿ ಬಾಂಬ್ ಧಾಳಿ

ಸತ್ತವರು (ಇಲ್ಲಿಯವರೆಗು) : ೨೧ ಜನ

ಅರ್ಧ ಸತ್ತವರು/ ಮುಕ್ಕಾಲು ಭಾಗ ಸತ್ತವರು (ಇಲ್ಲಿಯವರೆಗೂ) : ೧೪೦ ಜನ

Mumbai serial bomb blasts 2011

ಸರ್ಕಾರಗಳ ನಿರ್ವೀರ್ಯತೆಗೆ ಕೊನೆ ಎಂದು?

ಪಟ್ಟಿ ಮುಂದುವರಿಯುತ್ತದೆ. ನಿರೀಕ್ಷಿಸಿ.

Mumbai serial blasts July 2011

ಬಾಂಬ್ ನ ಭಯಾನಕತೆ. ಚಿತ್ರ ಕೃಪೆ : ಐಬಿಎನ್ ಲೈವ್.ಕಾಮ್

 ಬಾಂಬ್ ಸ್ಫೋಟವಾದಾಗಲೇ ತಕ್ಷಣವೇ ಸತ್ತುಬಿಡೋದೇ ಒಳ್ಳೆಯದು. ಆಮೇಲೆ ಆಸ್ಪತ್ರೆಲಿ ತಿಂಗಳು ಕಾಲ ಇದ್ದು ಸತ್ರೆ ಪತ್ರಿಕೇಲೂ ಸುದ್ದಿಯಾಗಲ್ಲ, ಟೀವಿಲೂ ಸುದ್ದಿಯಾಗಲ್ಲ. ಜನರ ಅನುಕಂಪವೂ ಸಿಗಲ್ಲ. ಎಂಥಾ ಬೇನಾಮಿ, ಬೇವರ್ಸಿ ಸಾವು..! ಸಾಯೋರ್ ಇದ್ರೆ ಬೇಗ ಅಟ್ಲೀಸ್ಟ್ ಬೇಗನಾದ್ರೂ ಸತ್ ಬಿಡ್ಲಿ. ಟೀವಿನಲ್ಲಾದ್ರೂ ಬರುತ್ತೆ. ಇಲ್ಲಾಂದ್ರೆ, ಅವರ ಸಾವಿಗೂ ಬೆಲೆಯಿರಲ್ಲ..! ಜನರ ಜೀವಕ್ಕೆ ಬೆಲೆ ಎಲ್ಲಿದೆ ಹೇಳಿ?

 ಅತಿ ದೊಡ್ಡ ಪ್ರಜಾಪ್ರಭುತ್ವ ನಮ್ಮದೇ. ಬಹುಶಃ ಅತಿ ಕೆಟ್ಟ ಪ್ರಜಾಪ್ರಭುತ್ವ ಮತ್ತು ಅತಿ ಭ್ರಷ್ಟ ರಾಜಕಾರಣಿಗಳು ಇರೋದೂ ನಮ್ ದೇಶದಲ್ಲೇ.

ಈ ಎಲ್ಲದಕ್ಕೂ ಕಾರಣ ಮುಸ್ಲೀಮರನ್ನ ಓಲೈಸುವುದಕ್ಕಾಗಿ ನಮ್ಮ ರಾಜಕಾರಣಿಗಳು ರೂಪಿಸುವ ನೀತಿಗಳು. ಎಲ್ಲ ಮುಸ್ಲೀಮರು ಕೆಟ್ಟವರಲ್ಲ. ಆದರೆ, ಇಂಥವರಿಂದ ಒಳ್ಳೆಯವರ ಸಾಧನೆಗಳೂ ಧರ್ಮದ ಕಾರಣಗಳಿಗಾಗಿ ಮಸುಕಾಗಬಾರದು.

ರಾಜಕೀಯ ಪರಿಣಾಮಗಳು ಏನಾಗಬಹುದು? ಮೋದಿಯ ಹಾದಿ ಸುಗಮವಾಗಬಹುದು

Mumbai terror attack July 2011

ಜೀವಕ್ಕೆ, ಕಣ್ಣೀರಿಗೆ ಬೆಲೆ ಇಲ್ಲವಾ? ಚಿತ್ರಕೃಪೆ : ಐಬಿಎನ್ ಲೈವ್.ಕಾಮ್

. ರಾಹುಲ ಗಾಂಧಿ ಎಂದೂ ಉಗ್ರವಾದದ ವಿರುದ್ಧ ಉಗ್ರವಾಗಿ ಮಾತಾಡಿಲ್ಲ. ಯುವ ಜನರಿಗೆ ರಾಹುಲಗಾಂಧಿಯಂಥಾ ಎಳಸುಗಳಿಗಿಂತ ಗಟ್ಟಿಯಾಗಿ ನಿಲ್ಲುವ ಮೋದಿ ಇಷ್ಟವಾಗಬಹುದು. ಉಗ್ರವಾದವನ್ನ ಮಟ್ಟ ಹಾಕಲಿಕ್ಕೆ ಮೋದಿಯೇ ಸರ್ವಶಕ್ತ ಎಂಬ ಮನೋಭಾವ ಮೂಡಬಹುದು. ಕಾಂಗ್ರೇಸ್ ವಿರೋಧಿ ಅಲೆ ಜೋರಾಗಬಹುದು. ಇವೆಲ್ಲದರ ಮಧ್ಯೆ ಒಂದಿಷ್ಟು ಜನರನ್ನ ಹಿಡಿದು ಇವರೇ ಸಂಚುಗಾರರು ಅಂತ ಪೊಲಿಸರು ನಾಕ್ ದಿವ್ಸ ತಿರ್ಗಾಡ್ಕಂಡ್ ಅಡ್ಡಾಡ್ತಾರೆ. ಆಮೇಲೆ ನೀವೂ ಮರೀತೀರ ಬಾಂಬ್ ಎಲ್ಲಿ ಸ್ಫೋಟ ಆಗಿತ್ತು ಅಂತಾ. ನಾವೂ ಮರೀತೀವಿ. Aishwarya Rai Pregnant photosಮಾಧ್ಯಮಗಳು ನಾಕ್ ದಿವ್ಸ ವರದಿ ಮಾಡ್ತವೆ. ಐದನೇ ದಿವ್ಸಕ್ಕೆ ಯಾನಾ ಗುಪ್ತಾ ಗುಪ್ತಾಂಗಗಳಿಗೆ ಪ್ಯಾಂಟಿ ಹಾಕಿಕೊಂಡು ಬಂದಿದ್ದು ಸುದ್ದಿಯಾಗುತ್ತೆ. ಇಲ್ಲವೇ ಐಶ್ವರ್ಯ ಯಾವ್ ಮಗು ಹಡೀತಾಳೇ ಅನ್ನೊದ್ ಸುದ್ದಿ. ಸರ್ಕಾರಗಳು ಬಾಂಬ್ ಸ್ಫೋಟದಲ್ಲಿ ಮಡಿದವರಿಗೆ, ಅಂಗಾಂಗ ಕಳೆದುಕೊಂಡವರಿಗೆ ಪರಿಹಾರ “ಘೋಷಣೆ “ಮಾಡ್ತವೆ. ಕೊಡಬೇಕು ಅಂತಾ ಏನೂ ರೂಲ್ಸ್ ಇಲ್ಲ.

Yana Gupta pantyless stunt

ಇನ್ನೊಂದ್ ವಾರ ಬಿಟ್ ನ್ಯೂಸ್ ಚಾನಲ್ ಗಳನ್ನ ನೋಡಿ. ಇಂಥಾ ಸುದ್ದಿ ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗದಿದ್ರೆ ಕೇಳಿ.

ಹಿಂಗೇ ಆಗುತ್ತೆ ಅಂತಾ ಕನಸಂತೂ ಬಿದ್ದಿಲ್ಲ. ಎಚ್ಚರವಾಗೇ ಇದ್ದೇನೆ. ಆದರೆ, ಹಿಂದೆ ನಡೆದ ಬಾಂಬುಗಳ ಸದ್ದುಗಳನ್ನ ಕೇಳಿದಾಗಲೆಲ್ಲಾ, ಟಿವಿ ಪತ್ರಿಕೆಗಳನ್ನ, ಹೇತ್ಲಾಂಡಿ ಪ್ರಧಾನಿಯನ್ನ ನೋಡಿದಾಗಲೆಲ್ಲಾ ಇದಕ್ಕಿಂತ ಇನ್ನೇನೂ ಘಟಿಸಲಿಕ್ಕೆ ಉಳಿದಿಲ್ಲ ಅನ್ನಿಸದೇ ಇರುತ್ತದೆಯೇ?

 ಹತಾಶೆ ಬಿಟ್ಟು ಇನ್ನೇನೂ ಹೇಳಕ್ ಉಳಿದಿಲ್ಲ.