ಇವತ್ತಿನ(4 ಮಾರ್ಚ್ 2008) ಟೈಮ್ಸ್ ಆಫ್ ಇಂಡಿಯಾ(English) ಓದ್ರಿ. ಜೊತೆಗೆ ಎಲ್ಲಾ ಕನ್ನಡ ಪತ್ರಿಕೆಗಳನ್ನೂ. ನೆನ್ನೆ Sasken ಕಂಪನಿಯ ಕೆನಡಾ ಮೂಲದ ವ್ಯಕ್ತಿಯೊಬ್ಬ ಕನ್ನಡ, ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ‘ಕವನ’ ಬರೆದಿದ್ದಕ್ಕೆ ಕ.ರ.ವೇ ಕಾರ್ಯಕರ್ತರು ದೊಮ್ಮಲೂರು, ಬೊಮ್ಮನಹಳ್ಳಿ ಬ್ರಾಂಚುಗಳ ಮೇಲೆ ಧಾಳಿ ಮಾಡಿ, ಗಾಜು ಕಂಪ್ಯೂಟರು, ಸೋಫಾ ಎಲ್ಲಾ ಹಾಳು ಮಾಡಿದ್ದಾರೆ. (ಬಾಗ್ಮನೆ ಟೆಕ್ ಪಾರ್ಕಲ್ಲಿ ಇನ್ನೊಂದು ಬ್ರಾಂಚು ಇದೆ. ತಿಳಿದಿದ್ದರೆ ಅದಕ್ಕೂ ಕಲ್ಲಿಬೀಳುತ್ತಿದ್ದವೇನೋ!) ಆದರೆ ಇದಕ್ಕೆಲ್ಲಾ ಏನು ಕಾರಣ? ಕಂಪನಿ ಹೆಚ್.ಆರ್. ಗಳೇನು ಸಗಣಿ ತಿನ್ತಿದ್ರಾ? ಕಂಪನಿಯ ಎಲ್ಲಾ ಉದ್ಯೋಗಿಗಳ ವರ್ತನೆ ಬಗ್ಗೆ “ವಿಶೇಷ ನಿಗಾ” ಇಡುವ ಇವರು ಇಂಥಾ ಭಾಷಾ ಅವಹೇಳನಕಾರಿಯ ಅಂಶದ ಬಗ್ಗೆ ಗಮನ ಹರಿಸಲಿಲ್ಲವಾ? ಇಷ್ಟೊಂದು ದೊಡ್ಡ ಆಘಾತವಾದಗಲೇ ಸರಿಪಡಿಸಿಕೊಳ್ಳಬೇಕಾ?
ನಿನ್ನೆಯೆಲ್ಲಾ ಟಿ.ವಿ.9 ನಲ್ಲಿ ಬೆಳಗಿಂದಾ ಸಂಜೆ ತನಕ ಪ್ರಸಾರವಾಗಿತ್ತು ಈ ಸುದ್ದಿ. ಇಂದಿನ ಎಲ್ಲ ಕನ್ನಡ ಪತ್ರಿಕೆಗಳಲ್ಲೂ ಬಂದಿದೆ, ಅದೂ ಹೆಡ್ಲೈನಾಗಿಯೇ. ನಾನು ಮೊದಲು ಹೇಳಿದ್ದು ಇಂಗ್ಳೀಷಿನ “ಟೈಮ್ಸ್ ಆಫ್ ಇಂಡಿಯಾ” ನೋಡ್ರಿ ಅಂತಾ. ನಿನ್ನೆ ಕಂಪನಿ ಉದ್ಯೋಗಿಗಳಿಗೆಲ್ಲಾ ಮಧ್ಯಾಹ್ನ 2.30 ಕ್ಕೇ ರಜೆ ಘೋಷಿಸಿ, ಮನೆಗೆ ಕಳುಹಿಸಿದ್ದಾರೆ. ಒಂದು ಬಹುರಾಷ್ಟ್ರೀಯ ಕಂಪನಿಯು ತನ್ನೆಲ್ಲಾ ಉದ್ಯೋಗಿಗಳಿಗೆ ಆಕಸ್ಮಿಕ ರಜೆ ಘೋಷಿಸಿದರೆ, ಕಂಪನಿಗೆ ಕಲ್ಲು ಬಿದ್ದರೆ ಅದು ಮುಖಪುಟದಲ್ಲಿ ಬರದಷ್ಟು ‘ಕೆಳದರ್ಜೆ ಸುದ್ದಿ’ ಅದಕ್ಕೇ ಟೈಮ್ಸ್ನಲ್ಲಿ 5ನೇ ಪುಟದಲ್ಲಿ ಪೇಜ್ ಫಿಲ್ಲರ್ ಆಗಿದೆ. ಆತ ಬರೆದ ಅವಹೇಳನಾಕಾರಿ ಕವನ ಪ್ರಕಟವಾಗಿಲ್ಲ. ಅವರಿಗೆ ಅದು ಸಿಗಲಿಲ್ಲವೆಂದಲ್ಲ. ಬೆಂಗಳೂರಿನ ‘ಇಮೇಜು’ ಜಾಗತಿಕ ಮಟ್ಟದಲ್ಲಿ ಕೆಡಬಾರದಲ್ವಾ ಅದಕ್ಕೆ..! ಪೋಲೀಸರು ಕೇಸು ದಾಖಲಿಸಿಕೊಂಡಿದ್ದಾರೆ ಅಂತ ಮಾತ್ರ ಪ್ರಕಟಿಸಿದೆ. ಎಷ್ಟೇ ಆಗಲಿ ಟೈಮ್ಸ್ ಕನ್ನಡಕ್ಕೆ ಯಾವಾಗ ನಿಯತ್ತು ಮೆರೆದಿತ್ತು? ಈ ಸುದ್ದಿ ಮುಖಪುಟದಲ್ಲಿ ಪ್ರಕಟವಾಗಲಿಲ್ಲ ಯಾಕಂದ್ರೆ ತಪ್ಪು ಕಂಪನಿಯದು. ತಪ್ಪೇನಾದ್ರೂ ಕನ್ನಡದವರದ್ದಾಗಿದ್ದರೆ, ಮುಖಪುಟದಲ್ಲಿ namma benaguru ವ್ಯಕ್ತಿಗಳಿಂದ ಹಲ್ಲೆ, ದಾಂಧಲೆ ಅಂತೆಲ್ಲಾ ಬರೀತಿತ್ತು..!
ಮೊನ್ನೆ ಮೊನ್ನೆ ನೆಡೆದ ಕನ್ನಡ ರಾಜ್ಯೋತ್ಸವದ ವಿಚಾರನೇ ತೊಗೊಳ್ಳಿ. ಇಡೀ ರಾಜ್ಯಕ್ಕೆ ರಾಜ್ಯಾನೇ ಸಿಂಗಾರ ಮಾಡಿಕೊಂಡು ಕನ್ನಡ ರಾಜ್ಯೋತ್ಸವ ಆಚರಿಸುತ್ತಾ ಇದ್ರೆ, ಒಂದು ಸಾಲಾದ್ರೂ ಬಂದಿತ್ತಾ ಟೈಮ್ಸ್ನಲ್ಲಿ? ಅಸಲಿಗೆ ಕನ್ನಡವೇ ಬರದ ಇಬ್ಬರು ಬೇನಾಮಿ ವ್ಯಕ್ತಿಗಳು(ಜೆನ್ನಿಫರ್, ಧ್ಯಾನ್) ಕನ್ನಡ ಬಾವುಟ ಹಿಡ್ಕಂಡಿರದು ಫೋಟೋ ಬಂದಿತ್ತು we are so proud to hold this flag ಅನ್ನೋ ಶೀರ್ಷಿಕೆಯೊಂದಿಗೆ ಐನಾತಿ Bangalore Timesನಲ್ಲಿ ಬಂದಿತ್ತು..!
ಅದೇ ಬೆಂಗಳೂರಲ್ಲಿ ಬಾರು, ಪಬ್ಬು, ಗಬ್ಬು ಎಲ್ಲಾ ಸಮಾವೇಶ ನೆಡೆಸಲಿ ಅಲ್ಲಿಯ ವರದಿ ಮುಖಪುಟದಲ್ಲಿ ಪ್ರಕಟವಾಗುತ್ತೆ! ಇನ್ನಾದ್ರೂ ಗೊತ್ತಾಯ್ತಾ ಕನ್ನಡದವರು ಹೋರಾಡಬೇಕಾಗಿರೋದು ಬೆಂಗಳೂರಲ್ಲಿ ಝಾಂಡಾ ಊರಿರುವ ಪರ್ದೇಸಿಗಳೊಂದಿಗೆ ಮಾತ್ರವಲ್ಲ. ಬರೀ ಪರ್ದೇಸಿಗಳಿಗೆ ಪ್ರಚಾರ ಸೌಲಭ್ಯ ಒದಗಿಸಿ ಅವರಿಗೆ ‘ಸ್ವಲ್ಪವೂ ನೋವಾಗದಂತೆ’ ನೋಡಿಕೊಳ್ಳುವ ಟೈಮ್ಸ್ನಂಥಾ ಇಂಗ್ಳೀಷ್ ಪತ್ರಿಕೆಗಳ ಜೊತೆಗೆ!
ಟೈಮ್ಸ್ ಪತ್ರಿಕೆಯಾಗಿ ‘ದಲ್ಲಾಳಿ’ ಕೆಲ್ಸನೂ ಮಾಡುತ್ತೆ. ಪಬ್ಗಳು ರಾತ್ರಿ 11.30ಕ್ಕೆ ಮುಚ್ಚುತ್ತಿದ್ದವು. ಇದನ್ನ 1.30ರ ವರೆಗೆ ವಿಸ್ತರಿಸಲು ಒತ್ತಡ ಹಾಕುವಲ್ಲಿ ಟೈಮ್ಸ್ ಯಶಸ್ವಿಯಾಗಿದೆ. ಬೆಂಗಳೂರಲ್ಲಿ ಪಬ್ಬುಗಳು 11.30ಕ್ಕೇ ಮುಚ್ಚಿಬಿಟ್ರೆ ಜಾಗತಿಕ ಮಟ್ಟದ ‘ಕಾಸ್ಮೋಪಾಲಿಟನ್’ ನಗರದ ಚರ್ಯೆ ಬದಲಾಗಿಹೋಗುತ್ತದೆ ಅಂತೆಲ್ಲಾ ಬರೀತು. ಡಿಸ್ಕೋಗಳಲ್ಲಿ ಡ್ಯಾನ್ಸ್ ಬಂದ್ ಮಾಡಿದಾಗ ಎಸ್ಸೆಮ್ಮೆಸ್ ಅಭಿಪ್ರಾಯ ಸಂಗ್ರಹಣೆಗೆ ತೊಡಗಿತು. ಈ ಅಭಿಪ್ರಾಯ ಸಂಗ್ರಹಗಳನ್ನು ಯಾವರೀತಿ ಬೇಕಾದ್ರೂ ಉಪಯೋಗಿಸಿಕೊಳ್ಳಬಹುದು ಬಿಡಿ. ಏನು ಬರೆಯಬಹುದಾಗಿತ್ತೋ ಅದನ್ನೇ ಬರೀತು.
ನಿನ್ನೆ ಪಾರ್ಟಿಗೆ ಯಾರ್ಯಾರು ಬಂದಿದ್ರು, ಯಾವಳು ಯಾವನ ಜೊತೆ ನಿನ್ನೆ ಮಲಗಿದ್ದಳು, ಇವತ್ತು ಯಾರ ಜೊತೆ ಮಲಗ್ತಾಳೆ, ನಿನ್ನೆ ಯಾವಳು ಚಡ್ಡಿ ಪ್ಯಾಂಟಿ ಹಾಕಿಕೊಂಡು ಮಲಗಿರಲಿಲ್ಲ ಅಂತಾ ಲಂಗ ಎತ್ತಿ ನೋಡಿಕೊಂಡು ಬಂದು ವರದಿ ಮಾಡುವ Banaglore Times ಹೊಂದಿರುವ The Times of India ಬಗ್ಗೆ ಕನ್ನಡಿಗರು ನಿರೀಕ್ಷೆ ಮಾಡುವಂಥದ್ದೇನೂ ಇಲ್ಲ. ಆದರೂ ಬೆಂಗಳೂರಲ್ಲಿ ಸರ್ಕ್ಯುಲೇಷನ್ ಇರೋ ಪತ್ರಿಕೆಯಲ್ಲಿ ಬೆಂಗಳೂರು, ಬೆಂಗಳೂರನ್ನ ರಾಜಧಾನಿಯಾಗಿ ಹೊಂದಿರುವ ಕರ್ನಾಟಕದ ಬಗ್ಗೆ ಸುದ್ದಿ ಪ್ರಕಟವಾಗಬೇಕು ಅಂತಾ ಬಯಸುವುದರಲ್ಲಿ ತಪ್ಪೇನಿದೆ?