ನಮ್ ರಾಜಕಾರಣಿಗಳಿಗೆ ಸಿಎಂ ಡಿಸಿಎಂ ಸೀಟುಗಳು ಒಂಥರಾ ಸುಂದರ ವೇಶ್ಯೆ ಇದ್ದಂಗೆ. ಎಲ್ಲರಿಗೂ Simply irrestible..?

ಸಂವಿಧಾನದತ್ತವಾದ ಪ್ರಜಾಪ್ರಭುತ್ವದ ಉನ್ನತ ಹುದ್ದೆಗಳಾದ ಸಿಎಂ ಡಿಸಿಎಂ ಪದಗಳನ್ನ ತುಚ್ಛವಾಗಿ ಕಾಣುವ ಇರಾದೆ ಈ ಲೇಖನಕ್ಕೆ ಇಲ್ಲ. ಆದರೆ, ಪ್ರಸ್ತುತ ರಾಜಕೀಯ (ಅ)ನೈತಿಕತೆಯ ಹಿನ್ನೆಲೆಯಲ್ಲಿ ಈ ದೃಷ್ಟಿಕೋನದ ವಿಮರ್ಶೆ ಅಗತ್ಯವೆನಿಸಿತು. ಶೆಟ್ಟರರು ಮುಖ್ಯಮಂತ್ರಿಗಳಾಗಿದ್ದಾರೆ. ಉತ್ತರ ಕರ್ನಾಟಕದ ಕಡೆಯ ಪ್ರಭಾವಿ ನಾಯಕ. ಅವರಿಗೆ ಒಳಿತಾಗಲಿ. ಜೊತೆಗೆ, ಅವರಿಂದ ರಾಜ್ಯಕ್ಕೆ ಒಳಿತಾಗಲಿ. ನಿರೀಕ್ಷೆಗಳಂತೂ ಇವೆ. ನಿರಾಸೆಗೊಳ್ಳದಿರಲಿ.

ಕುಮಾರಸ್ವಾಮಿಯವರ ವಚನ “ಭ್ರಷ್ಟತೆ” ಹಿನ್ನೆಲೆಯಲ್ಲಿ ಯಡಿಯೂರಪ್ಪನವರನ್ನ ಗೆಲ್ಲಿಸಿದೆವು. ಮುಖ್ಯಮಂತ್ರಿಯಾದರು. ಆದರೆ “ಭ್ರಷ್ಟತೆ”ಯಿಂದ ರಾಜೀನಾಮೆ ಕೊಡಬೇಕಾಯಿತು. ಯಡಿಯೂರಪ್ಪನವರ ಆಶೆಯಂತೆಯೇ ಸದಾನಂದ ಗೌಡರನ್ನ ಮುಖ್ಯಮಂತ್ರಿ ಮಾಡಲಾಯಿತು. ಕೆಲವೇ ತಿಂಗಳುಗಳು ಕಳೆಯುವುದರೊಳಗೆ ಗೌಡರು ಗುಳಿಗೆ ಒಗೆಯಬೇಕೇ? ಪಾಪ ಅಲ್ಲಿ ಯಡಿಯೂರಪ್ಪನವರಿಗೆ ಎದುರಾದದ್ದು ಇದೇ “ವಚನ ಭ್ರಷ್ಟತೆ”..! ತಾವು ಹೇಳಿದಂತೆ ಕೇಳ್ತೀನಿ ಅಂದದ್ದಕ್ಕೆ ಮುಖ್ಯಮಂತ್ರಿ ಮಾಡಿದರೆ ದಿನ ಕಳೆಯುವುದರಲ್ಲಿ ಉಲ್ಟಾ ಹೊಡೆಯಬೇಕೇ? ಈಗ ಗೌಡರನ್ನ ಇಳಿಸಿ ಶೆಟ್ಟರರನ್ನ ಮುಖ್ಯಮಂತ್ರಿ ಮಾಡಲಾಗಿದೆ. ಶೆಟ್ಟರು ಏನು ವಚನ ಕೊಟ್ಟಿದ್ದಾರೋ ಗೊತ್ತಿಲ್ಲ.

ಈಗ ಸಿಎಂ ಯಾರಾಗಬೇಕು, ಡಿಸಿಎಂ ಯಾರಾಗಬೇಕು ಅನ್ನೋದಕ್ಕೆ ಹಲವಾರು ಹೆಸರುಗಳು ತೇಲಿಬಂದವು. ಈಶ್ವರಪ್ಪ, ಕಾರಜೋಳ ಹೆಸರುಗಳು ಪ್ರಮುಖವಾದವು. ಜಿ.ಎಂ ಸಿದ್ದೇಶರೂ ತಾವೂ ಹಿರಿಯರು ಅಂತಾ ಇದೀವಿ ಬಿಜೆಪೀಲಿ ಅನ್ನೋದನ್ನ ಬಿಡಿಸಿ ಹೇಳಿದರು.

ಒಂದು ಕಥೆ ನೆನಪಿಗೆ ಬರ್ತಾ ಇದೆ. ಎಲ್ಲಿ ಓದಿದ್ದೆ ಅಂತಾ ನೆನಪಿಲ್ಲ. (ಓದುಗರು ಗೊತ್ತಿದ್ದರೆ ಕಾಮೆಂಟಿನಲ್ಲಿ ಹೆಸರಿಸಿ). ಆತ ಬಹಳ ದೊಡ್ಡ ರಾಜ. ಸುಂದರ ಪತ್ನಿಯಿದ್ದಳು. ಯುದ್ಧಕ್ಕೆ ಹೋಗಬೇಕಾಯಿತು. ಪತ್ನಿಯ ಬಗ್ಗೆ ಅತಿಯಾದ ಮೋಹವಿತ್ತು. ಯುದ್ಧ ಮುಗಿಸಿ ಬರುವವರೆಗೂ(ಮುಗಿಸಿ ಬರುತ್ತೇನೆಂಬ ಖಾತ್ರಿ ಇಲ್ಲದಿದ್ದರೂ) ಹೆಂಡತಿಯನ್ನ ಯಾರಾದರೂ ಭೋಗಿಸಿದರೆ ಅನ್ನೋ ಯೋಚನೆ ತಲೆಯಲ್ಲಿ ತಲೆಯಲ್ಲಿ ಸುಳಿಯಿತು. ಹಾಗಾಗಿ ಆಕೆಯ ದೇಹ ತನ್ನನ್ನ ಅಲ್ಲದೇ ಮತ್ಯಾರಿಗೂ ದೊರಕಬಾರದು. ಹಾಗೊಂದು ಉಪಾಯ ಮಾಡಬೇಕೆಂದುಕೊಂಡ. ಆಕೆಯ ಗುಪ್ತಾಂಗಗಳಿಗೆ ಬೀಗ ಹಾಕಿದನಂತೆ. ಬೀಗ ಹಾಕಿದ ಸರಿ. ಆದರೆ ಬೀಗದ ಕೈಯನ್ನ ಯುದ್ದಕ್ಕೆ ತೆಗೆದುಕೊಂಡು ಹೋದರೆ ಎಲ್ಲಾದರೂ ಕಳೆದು ಹೋದರೆ? ತನ್ನ ಹೆಂಡತಿ ತನಗೇ ಪರಕೀಯಳಾಗಿಬಿಟ್ಟಾಳು ಅನ್ನೋ ಯೋಚನೆಯೂ ಸುಳಿಯಿತು. ಹಾಗಾಗಿ ತನ್ನ ಪರಮಾಪ್ತ ಮಿತ್ರನಿಗೆ ಬೀಗವನ್ನೊಪ್ಪಿಸಿ, ಹಿನ್ನೆಲೆಯನ್ನ ಅರುಹಿ, ಜೋಪಾನವಾಗಿ ಕಾಪಾಡುವಂತೆ ಹೇಳಿದ. ತನ್ನ ಪರಮಾಪ್ತ ಮಿತ್ರನಿಗೆ ಒಪ್ಪಿಸಿದ್ದರಿಂದ ಒಂದಷ್ಟರ ಮಟ್ಟಿಗೆ ನಿರುಮ್ಮಳನಂತೆ ಕಂಡು ತನ್ನ ಯುದ್ಧ ತೈಯಾರಿಯಲ್ಲಿ ತೊಡಗಿದ.

ಹೀಗಿದ್ದಾಗ, ಆ ಆಪ್ತ ಗೆಳೆಯ ಬಂದ.

“ಬೇರೆ ಯಾವುದೋ ಬೀಗದ ಕೈ ಕೊಟ್ಟಿದ್ದೀಯ. ಈ ಬೀಗದ ಕೈ ನೀ ಹೇಳಿದ ಬೀಗದ್ದಲ್ಲ” ಅಂದ..!

ಬೀಗದ ಕೈಯನ್ನ ಬೀಗದಲ್ಲಿ ತೂರಿಸಿ ತೆಗೆಯಲು ಪ್ರಯತ್ನಿಸದಿದ್ದರೆ ಆತ ಹೇಗೆ ಈ ಮಾತನ್ನ ಹೇಳಲಿಕ್ಕೆ ಸಾಧ್ಯ..? ಇಂಥಾ ಸಂಗತಿಗಳಲ್ಲಿ, “ವಚನ”ದ ಅರ್ಥ, ಅರ್ಥ ವ್ಯಾಪ್ತಿ, ಸೀಮಿತತೆ, ನಿಷ್ಟೆ ಎಲ್ಲವೂ ಪ್ರಶ್ನಿಸಲ್ಪಡುತ್ತವೆ. ಅದೇ ರೀತಿ ಅಫಜಲ ಖಾನನು ಶಿವಾಜಿಯ ವಿರುದ್ಧದ ಯುದ್ಧದಲ್ಲಿ ಸೋಲುಣ್ಣುವ ಭವಿಷ್ಯವಾಣಿಯನ್ನ ಜ್ಯೋತಿಷಿಯಿಂದ ಕೇಳಿದಮೇಲೆ ತನ್ನ ನೂರೈವತ್ತೂ ಚಿಲ್ಲರೆ ಹೆಂಡತಿಯರನ್ನ ಬಾವಿಯಲ್ಲಿ ಹಾರಿಸಿ, ಸಮಾಧಿ ಕಟ್ಟಿ, ಶಿವಾಜಿ ವಿರುದ್ಧ ಯುದ್ಧ ಮಾಡಿ ತಾನೂ ಸೋತು-ಸತ್ತಾದಮೇಲೆ ತನ್ನನ್ನೂ ಅವರ ಪಕ್ಕದಲ್ಲೇ ಸಮಾಧಿ ಮಾಡಿಸಿಕೊಂಡ ಅಫಜಲಖಾನ ನಮ್ಮ ಪ್ರಸ್ತುತ ರಾಜಕಾರಣದ ಅನೈತಿಕತೆಗೆ ಪ್ರತಿಮೆಯಾಗುತ್ತಾನೆ.

ಯಡಿಯೂರಪ್ಪನವರು ಸಿಎಂ ಸೀಟಿನ ಕೀಲಿಯನ್ನ ಸದಾನಂದಗೌಡರಿಗೆ ಹಸ್ತಾಂತರಿಸುವಾಗ ಈ ಕಥೆಯನ್ನ ಓದಿದ್ದರೆ ಚೆಂದವಿರುತ್ತಿತ್ತು. ಈಗ ಆ ಕೀಲಿಯನ್ನ ಗೌಡರಿಂದ ಕಸಿದು ಶೆಟ್ಟರಿಗೆ ನೀಡುತ್ತಿದ್ದಾರೆ. ಈಗಲಾದರೂ ಈ ಕಥೆ ಅವರಿಗೆ ಮುಟ್ಟಲಿ.

ಅಧಿಕಾರ ಮತ್ತು ಹೆಣ್ಣಿನ ವಿಷಯಗಳಲ್ಲಿ ಎಂಥವರ ನಂಬಿಕೆ, ನಿಷ್ಠೆಗಳೇ ಆಗಲಿ ಪ್ರಶ್ನಿಸಲ್ಪಡುತ್ತವೆ. ಪುಕ್ಕಟೆ ಸಿಕ್ಕರೆ, ಅಥವಾ ಇಬ್ಬರ ಜಗಳದಲ್ಲಿ ಮೂರನೆಯವರಾಗಿ ಲಾಭ ದೊರೆತರೂ ಹಿಗ್ಗೋ ಹಿಗ್ಗು.
ಅದಕ್ಕೇ ಹೇಳಿದ್ದು, ನಮ್ ರಾಜಕಾರಣಿಗಳಿಗೆ ಸಿಎಂ ಡಿಸಿಎಂ ಸೀಟುಗಳು ಒಂಥರಾ ಸುಂದರ ವೇಶ್ಯೆ ಇದ್ದಂಗೆ. ಎಲ್ಲರಿಗೂ Simply irrestible..?

ಮುಂಬೈ ಸರಣಿ ಸ್ಫೋಟ : ಹಿನ್ನೋಟವಲ್ಲ. ಒಂದು “ಮುನ್ನೋಟ”

೧೩ ಜುಲೈ ೨೦೧೧

ಮುಂಬೈ ಮೇಲೆ ಉಗ್ರರ ಸರಣಿ ಬಾಂಬ್ ಧಾಳಿ

ಸತ್ತವರು (ಇಲ್ಲಿಯವರೆಗು) : ೨೧ ಜನ

ಅರ್ಧ ಸತ್ತವರು/ ಮುಕ್ಕಾಲು ಭಾಗ ಸತ್ತವರು (ಇಲ್ಲಿಯವರೆಗೂ) : ೧೪೦ ಜನ

Mumbai serial bomb blasts 2011

ಸರ್ಕಾರಗಳ ನಿರ್ವೀರ್ಯತೆಗೆ ಕೊನೆ ಎಂದು?

ಪಟ್ಟಿ ಮುಂದುವರಿಯುತ್ತದೆ. ನಿರೀಕ್ಷಿಸಿ.

Mumbai serial blasts July 2011

ಬಾಂಬ್ ನ ಭಯಾನಕತೆ. ಚಿತ್ರ ಕೃಪೆ : ಐಬಿಎನ್ ಲೈವ್.ಕಾಮ್

 ಬಾಂಬ್ ಸ್ಫೋಟವಾದಾಗಲೇ ತಕ್ಷಣವೇ ಸತ್ತುಬಿಡೋದೇ ಒಳ್ಳೆಯದು. ಆಮೇಲೆ ಆಸ್ಪತ್ರೆಲಿ ತಿಂಗಳು ಕಾಲ ಇದ್ದು ಸತ್ರೆ ಪತ್ರಿಕೇಲೂ ಸುದ್ದಿಯಾಗಲ್ಲ, ಟೀವಿಲೂ ಸುದ್ದಿಯಾಗಲ್ಲ. ಜನರ ಅನುಕಂಪವೂ ಸಿಗಲ್ಲ. ಎಂಥಾ ಬೇನಾಮಿ, ಬೇವರ್ಸಿ ಸಾವು..! ಸಾಯೋರ್ ಇದ್ರೆ ಬೇಗ ಅಟ್ಲೀಸ್ಟ್ ಬೇಗನಾದ್ರೂ ಸತ್ ಬಿಡ್ಲಿ. ಟೀವಿನಲ್ಲಾದ್ರೂ ಬರುತ್ತೆ. ಇಲ್ಲಾಂದ್ರೆ, ಅವರ ಸಾವಿಗೂ ಬೆಲೆಯಿರಲ್ಲ..! ಜನರ ಜೀವಕ್ಕೆ ಬೆಲೆ ಎಲ್ಲಿದೆ ಹೇಳಿ?

 ಅತಿ ದೊಡ್ಡ ಪ್ರಜಾಪ್ರಭುತ್ವ ನಮ್ಮದೇ. ಬಹುಶಃ ಅತಿ ಕೆಟ್ಟ ಪ್ರಜಾಪ್ರಭುತ್ವ ಮತ್ತು ಅತಿ ಭ್ರಷ್ಟ ರಾಜಕಾರಣಿಗಳು ಇರೋದೂ ನಮ್ ದೇಶದಲ್ಲೇ.

ಈ ಎಲ್ಲದಕ್ಕೂ ಕಾರಣ ಮುಸ್ಲೀಮರನ್ನ ಓಲೈಸುವುದಕ್ಕಾಗಿ ನಮ್ಮ ರಾಜಕಾರಣಿಗಳು ರೂಪಿಸುವ ನೀತಿಗಳು. ಎಲ್ಲ ಮುಸ್ಲೀಮರು ಕೆಟ್ಟವರಲ್ಲ. ಆದರೆ, ಇಂಥವರಿಂದ ಒಳ್ಳೆಯವರ ಸಾಧನೆಗಳೂ ಧರ್ಮದ ಕಾರಣಗಳಿಗಾಗಿ ಮಸುಕಾಗಬಾರದು.

ರಾಜಕೀಯ ಪರಿಣಾಮಗಳು ಏನಾಗಬಹುದು? ಮೋದಿಯ ಹಾದಿ ಸುಗಮವಾಗಬಹುದು

Mumbai terror attack July 2011

ಜೀವಕ್ಕೆ, ಕಣ್ಣೀರಿಗೆ ಬೆಲೆ ಇಲ್ಲವಾ? ಚಿತ್ರಕೃಪೆ : ಐಬಿಎನ್ ಲೈವ್.ಕಾಮ್

. ರಾಹುಲ ಗಾಂಧಿ ಎಂದೂ ಉಗ್ರವಾದದ ವಿರುದ್ಧ ಉಗ್ರವಾಗಿ ಮಾತಾಡಿಲ್ಲ. ಯುವ ಜನರಿಗೆ ರಾಹುಲಗಾಂಧಿಯಂಥಾ ಎಳಸುಗಳಿಗಿಂತ ಗಟ್ಟಿಯಾಗಿ ನಿಲ್ಲುವ ಮೋದಿ ಇಷ್ಟವಾಗಬಹುದು. ಉಗ್ರವಾದವನ್ನ ಮಟ್ಟ ಹಾಕಲಿಕ್ಕೆ ಮೋದಿಯೇ ಸರ್ವಶಕ್ತ ಎಂಬ ಮನೋಭಾವ ಮೂಡಬಹುದು. ಕಾಂಗ್ರೇಸ್ ವಿರೋಧಿ ಅಲೆ ಜೋರಾಗಬಹುದು. ಇವೆಲ್ಲದರ ಮಧ್ಯೆ ಒಂದಿಷ್ಟು ಜನರನ್ನ ಹಿಡಿದು ಇವರೇ ಸಂಚುಗಾರರು ಅಂತ ಪೊಲಿಸರು ನಾಕ್ ದಿವ್ಸ ತಿರ್ಗಾಡ್ಕಂಡ್ ಅಡ್ಡಾಡ್ತಾರೆ. ಆಮೇಲೆ ನೀವೂ ಮರೀತೀರ ಬಾಂಬ್ ಎಲ್ಲಿ ಸ್ಫೋಟ ಆಗಿತ್ತು ಅಂತಾ. ನಾವೂ ಮರೀತೀವಿ. Aishwarya Rai Pregnant photosಮಾಧ್ಯಮಗಳು ನಾಕ್ ದಿವ್ಸ ವರದಿ ಮಾಡ್ತವೆ. ಐದನೇ ದಿವ್ಸಕ್ಕೆ ಯಾನಾ ಗುಪ್ತಾ ಗುಪ್ತಾಂಗಗಳಿಗೆ ಪ್ಯಾಂಟಿ ಹಾಕಿಕೊಂಡು ಬಂದಿದ್ದು ಸುದ್ದಿಯಾಗುತ್ತೆ. ಇಲ್ಲವೇ ಐಶ್ವರ್ಯ ಯಾವ್ ಮಗು ಹಡೀತಾಳೇ ಅನ್ನೊದ್ ಸುದ್ದಿ. ಸರ್ಕಾರಗಳು ಬಾಂಬ್ ಸ್ಫೋಟದಲ್ಲಿ ಮಡಿದವರಿಗೆ, ಅಂಗಾಂಗ ಕಳೆದುಕೊಂಡವರಿಗೆ ಪರಿಹಾರ “ಘೋಷಣೆ “ಮಾಡ್ತವೆ. ಕೊಡಬೇಕು ಅಂತಾ ಏನೂ ರೂಲ್ಸ್ ಇಲ್ಲ.

Yana Gupta pantyless stunt

ಇನ್ನೊಂದ್ ವಾರ ಬಿಟ್ ನ್ಯೂಸ್ ಚಾನಲ್ ಗಳನ್ನ ನೋಡಿ. ಇಂಥಾ ಸುದ್ದಿ ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗದಿದ್ರೆ ಕೇಳಿ.

ಹಿಂಗೇ ಆಗುತ್ತೆ ಅಂತಾ ಕನಸಂತೂ ಬಿದ್ದಿಲ್ಲ. ಎಚ್ಚರವಾಗೇ ಇದ್ದೇನೆ. ಆದರೆ, ಹಿಂದೆ ನಡೆದ ಬಾಂಬುಗಳ ಸದ್ದುಗಳನ್ನ ಕೇಳಿದಾಗಲೆಲ್ಲಾ, ಟಿವಿ ಪತ್ರಿಕೆಗಳನ್ನ, ಹೇತ್ಲಾಂಡಿ ಪ್ರಧಾನಿಯನ್ನ ನೋಡಿದಾಗಲೆಲ್ಲಾ ಇದಕ್ಕಿಂತ ಇನ್ನೇನೂ ಘಟಿಸಲಿಕ್ಕೆ ಉಳಿದಿಲ್ಲ ಅನ್ನಿಸದೇ ಇರುತ್ತದೆಯೇ?

 ಹತಾಶೆ ಬಿಟ್ಟು ಇನ್ನೇನೂ ಹೇಳಕ್ ಉಳಿದಿಲ್ಲ.

ತನಗೂ ಈ ಕೃತ್ಯಗಳಿಗೂ ಸಂಬಂಧವಿಲ್ಲದಂತೆ ಕುಂತವನು ಭವ್ಯ ಭಾರತದ ಅತಿ ಹೇತ್ಲಾಂಡಿ ಪ್ರಧಾನಿ ಡಾ|ಮನಮೋಹನ್ ಸಿಂಗ್..!

  ಹಿಂದಿನ ಬರಹದಲ್ಲಿ ರಾಮದೇವ್ ಬಾಬಾ ಈ ಸತ್ಯಾಗ್ರಹದ ನಂತರ ಪೊಲಿಟಿಕಲಿ ಸ್ಟ್ರಾಂಗ್ ಆಗಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದೆ. ಬಹುತೇಕ ಹಾಗೆಯೇ ಆಗಿದೆ. ಸುಖಾ ಸುಮ್ಮನೆ ಕೇಂದ್ರ ಸರ್ಕಾರ ತನ್ನ ಕಾಲಮೇಲೆ, ತಲೆಮೇಲೆ, ಹಣೆಬರಹದ ಮೇಲೆ ಚಪ್ಪಡಿ ಕಲ್ಲು ಎಳೆದುಕೊಂಡಿದೆ.

Manamohan singh

Manamohan Singh - Courtesy Topnews.in

ಮಾನವೀಯ ಮೌಲ್ಯ ಇಟ್ಟುಕೊಂಡ ಯಾವ ವ್ಯಕ್ತಿಯೂ ಕೂಡಾ ಬಾಬಾ ಮತ್ತು ಅವರ ಸಂಗಡಿಗರ ಮೇಲಿನ ರಾತ್ರಿ ಧಾಳಿಯನ್ನ ಸಮರ್ಥಿಸಲಿಕ್ಕೆ ಸಾಧ್ಯವಿಲ್ಲ, ಕಾಂಗೇಸ್ಸೊಂದನ್ನು ಬಿಟ್ಟು..!  ಬಾಬಾ ರಾಮದೇವ್ ಗೆ ಭಾರೀ ಅನುಕಂಪದ ಅಲೆಯನ್ನ ಸೃಷ್ಟಿಸಿಕೊಡುವಲ್ಲಿ ಕೇಂದ್ರ ಸರ್ಕಾರದ ಪಾತ್ರ ಹಿರಿದು. ಏನೋ ಮಾಡಲು ಹೋಗಿ ಚಡ್ಡಿಯಲ್ಲಿ ಹುಳ ಬಿಟ್ಟುಕೊಂಡು ಕಡಿಸಿಕೊಳ್ಳುತ್ತಿರುವ ಅನುಭವ ಕೇಂದ್ರ ಸರ್ಕಾರಕ್ಕೆ ಮತ್ತು ಕಾಂಗ್ರೇಸ್ ಗೆ. ರಾತ್ರೋ ರಾತ್ರಿ ಮಹಿಳೆಯರು, ಮಕ್ಕಳು ಮತ್ತು ವಯಸ್ಸಾದ ಹಿರಿಯ ನಾಗರೀಕರಿರುವ ಸಭಾಂಗಣಕ್ಕೆ ನುಗ್ಗಿ ಹಲ್ಲೆ, ಲಾಠಿ ಬೀಸೋದು ಇದು ಯಾವ ಜಮಾನ ಅನ್ನೋದು ಅನುಮಾನ ಬರುತ್ತೆ. ಶಾಂತಿಯುತ ಸಭೆಗೆ ಪೊಲೀಸರನ್ನ ನುಗ್ಗಿಸಿ, ಅಶ್ರು ವಾಯು ಸೆಲ್ ಗಳನ್ನ ಸಿಡಿಸುವುದನ್ನ ಕಂಡಾಗ ಕಾರ್ಗಿಲ್ ಯುದ್ಧ ಕಣದಲ್ಲಿ ಯೋಧರು ಶೆಲ್ ಧಾಳಿ ನೆಡೆಸುವುದು ನೆನಪಿಗೆ ಬಂತು. ಆದರೆ, ತನ್ನದೇ ದೇಶದ ಮುಗ್ಧ ಪ್ರಜೆಗಳ ಮೇಲೆ ಅಪ್ರಚೋದಿತ ಧಾಳಿ ಮಾಡುವ ಸರ್ಕಾರ ಮುಂದೆ ಎಂದಿಗೂ ಪ್ರಜೆಗಳ ನಂಬಿಕೆಗಳನ್ನ ಗಳಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ.

   

Ram dev baba satyagraha - Midnight arrest

Ram dev baba satyagraha - Crushed by Center govt - Image courtesy - Deccan Herald

ಯಾವ ಪೊಲೀಸ್ ಆಯುಕ್ತನೂ ಇದನ್ನ ಸಮರ್ಥಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ. ರಾಮದೇವ್ ಬಾಬಾ ಬರೀ ಯೋಗ ಕ್ಲಾಸ್ ನಡೆಸಲಿಕ್ಕೆ ಅನುಮತಿ ತೆಗೆದುಕೊಂಡರು. ಸತ್ಯಾಗ್ರಹ ಮಾಡಲಿಕ್ಕಲ್ಲ. ಆಯ್ತು. ಮಾಧ್ಯಮಗಳ ಮೂಲಕ ಅವರನ್ನ ಜಂತರ್ ಮಂತರ್ ಗೆ ತೆರಳಿ ಅಂತಾ ಮನವಿ ಮಾಡಬಹುದಿತ್ತಲ್ಲ? ನೋಟಿಸ್ ಕೊಡಬಹುದಿತ್ತಲ್ಲ? ಕಾನೂನು ಪ್ರಕಾರ ಸರಿಯಲ್ಲ ಅನ್ನಬಹುದಿತ್ತಲ್ಲ? ಇವ್ಯಾವನ್ನೂ ಮಾಡದೇ ತನ್ನ ರಾಜಕೀಯ ಕಾರಣಗಳಿಗೋಸ್ಕರ ಬಾಬಾ ಮತ್ತು ಸಾವಿರಾರು ಜನರನ್ನ ಎತ್ತಂಗಡಿ ಮಾಡಿಸಿದ್ದು ಜಲಿಯನ್ ವಾಲಾಬಾಗ್ ನ ಜನರಲ್ ಡಯರ್ ನ ಬರ್ಬರತೆಗೆ ಸಮ.

Soniya gandhi

Soniya Gandhi - Image courtesy - nilacharal.com


    ಬೆಳ್ಳಂ ಬೆಳಗ್ಗೆ ದಿಗ್ವಿಜಯ್ ಸಿಂಗ್ ಎಂಬ ಅರೆ ಹುಚ್ಚ, ಅವಕಾಶವಾದಿ ರಾಜಕಾರಣಿ ಈ ಪೊಲೀಸರ ಹಲ್ಲೆಯನ್ನ, ಲಾಠಿ ಬೀಸಿದ್ದನ್ನ ಸಮರ್ಥಿಸಿಕೊಳ್ಳುತ್ತಿರುವುದನ್ನ ನೆನಪಿಸಿಕೊಂಡರೆ ಹೇಸಿಗೆ ಹುಟ್ಟಿಸುತ್ತದೆ. ಇಂಥಾ ರಾಜಕಾರಣಿಗಳನ್ನ ಈ ಪ್ರಜಾಪ್ರಭುತ್ವ ಇನ್ನೂ ಉಳಿಸಿದೆಯಲ್ಲಾ ಅಂತಾ ಪ್ರಜಾಪ್ರಭುತ್ವದ ಬಗ್ಗೆ ಸಿಟ್ಟೂ ಹುಟ್ಟುತ್ತದೆ. ಮತಾಂಧ ಲಾಡೆನ್ ನ್ನ “ಲಾಡೆನ್ ಜೀ” ಅಂತಾನೆ. ಬಾಬಾ ರಾಮದೇವನನ್ನ “ಥಗ್”, “ಚೀಟ್” ಅಂತಾನೆ. ಈ ಮೋಸಗಾರನ ಮಡಿಲಲ್ಲೇ ತಾನೇ ಪ್ರಣಬ್ ಮುಖರ್ಜಿ, ಕಪಿಲ್ ಸಿಬಲ್ ಎಂಬ ಮುಂದಿನ ಸಾಲಿನ ಕಾಂಗ್ರೇಸ್ ನಾಯಕರು ವಾರಗಟ್ಟಲೇ ಇದ್ದುದು? ಮೋಸಗಾರನ ಜೊತೆ “ಡೀಲ್” ಮಾಡಿಕೊಳ್ಳುವ ಕೇಂದ್ರ ಸರ್ಕಾರ ಮೋಸಗಾರನಲ್ಲವಾ?

Ram dev baba addressing press conference after reaching Dehradun

Ram dev baba addressing press conference after reaching Dehradun - Image courtesy news24online.com

ಇದೆಲ್ಲಾ ಒಂದೆಡೆ ಬೆಳಗ್ಗೆ ನಡೆಯುತ್ತಿದ್ದರೆ, ತನಗೂ ಈ ಕೃತ್ಯಗಳಿಗೂ ಸಂಬಂಧವಿಲ್ಲದಂತೆ ಸೋನಿಯಾ ಮೇಡಂ ಆರ್ಡರ್ ಗಾಗಿ ಕಾದು ಕುಳಿತವನು ಭವ್ಯ ಭಾರತದ ಅತಿ ಹೇತ್ಲಾಂಡಿ ಪ್ರಧಾನಿ ಡಾ|ಮನಮೋಹನ್ ಸಿಂಗ್..! ಸಿಖ್ ಧರ್ಮಕ್ಕೇ ಅವಮಾನ ಈ ಮನಮೋಹನ ಸಿಂಗ್. ಸಿಖ್ಖರೆಂದರೆ ಧೈರ್ಯ, ನಿಷ್ಟುರತೆ, ಪ್ರಾಮಾಣಿಕತೆ ಇವೆಲ್ಲವುಗಳ ಸಾಕಾರ ಮೂರ್ತಿಗಳು. ಸಿಖ್ಖ್ ಧರ್ಮಕ್ಕೇ ಅವಮಾನ ಈತನಂತೆ ಇರುವವರು. ಕೆಲಸಕ್ಕೆ ಬಾರದ ವ್ಯಕ್ತಿಯನ್ನ “ಒಳ್ಳೆಯವನು” ಅಂತಾ ಪೂಜಿಸಲಿಕ್ಕೆ ನಮಗೇನೂ ಹುಚ್ಚಿಡಿದಿಲ್ಲ. ಆರ್ಥಿಕ ತಜ್ಞ, ಅಭಿವೃದ್ಧಿಯ ಹರಿಕಾರ, ಜಾಗತೀಕರಣದ ಬೇರು ನೆಟ್ಟಾತ ಎಲ್ಲ ಸರಿ. ಆದರೆ, ಪ್ರಧಾನಿಯಾಗಿ ಅಟ್ಟರ್ ಫ್ಲಾಪ್. ಇಂಥಾ ಬಾಯಿ ಸತ್ತ ಪ್ರಧಾನಿಯನ್ನ ಪಡೆದದ್ದು ಭಾರತದ ದುರ್ದೈವ. ಅದಕ್ಕೇ ಬಹುವಚನ ಬೇಡವೆನಿಸಿದೆ.

    ಇನ್ನು “ಟೈಮ್ಸ್ ನೌ” ಚಾನಲ್ ಗೆ ಜಲಿಯನ್ ವಾಲಾಬಾಗ್ ಚಿತ್ರಣ ನೆನಪಾಗುವುದಿಲ್ಲ. ಬ್ಲೂ ಸ್ಟಾರ್ ಆಪರೇಷನ್ ನೆನಪಾಗುತ್ತೆ..! ರಾಮದೇವ್ ಬಾಬಾನನ್ನ ಹೊತ್ತೊಯ್ದು ಮತ್ತೆ ಡೆಹರಾಡೂನ್ ಗೆ ಬಿಟ್ಟು ಬಂದ ದಿನ ಎಲ್ಲ ಮಾಧ್ಯಮಗಳಲ್ಲಿ ಬಾಬಾ ಮೇಲಿನ ಹಲ್ಲೆ ಬಗ್ಗೆ ಚರ್ಚೆ. ಆ ದಿನ ಎಲ್ಲ ಮಾಧ್ಯಮಗಳಿಗೂ ಈ ಸನ್ನಿವೇಸವನ್ನ ಬೇರೆ ಬೇರೆ ಡೈಮೆನ್ಷನ್ ಗಳಲ್ಲಿ ನೋಡುವ ತವಕ. ಟೈಮ್ಸ್ ನೌ ಚಾನಲ್ ನಲ್ಲಿ ಸಂಜೆ ಬ್ಲೂ ಸ್ಟಾರ್ ಆಪರೇಶನ್ ಬಗ್ಗೆ ಒಂದು ಕಾರ್ಯ ಕ್ರಮ ಪ್ರಸಾರವಾಯಿತು. ಎತ್ತಣ ಬಾಬಾ ಮೇಲಿನ ಹಲ್ಲೆ ಎತ್ತಣ ಬ್ಲೂಸ್ಟಾರು? ಇಲ್ಲಿ ಒಂದು ಸೂಕ್ಷ್ಮ ವಿಷಯವನ್ನ ಗಮನಿಸಬೇಕು.

೧. ಬ್ಲೂ ಸ್ಟಾರ್ ಆಪರೇಶನ್ ನಡೆದದ್ದು ಪ್ರತ್ಯೇಕತೆಯನ್ನ ಹತ್ತಿಕ್ಕಲಿಕ್ಕೆ. ಧಾರ್ಮಿಕವಾಗಿ ಅದು ಅನ್ ಎಥಿಕಲ್. ಪೊಲಿಟಿಕಲಿ ಕರಕ್ಟ್. ಇಡೀ ಪಂಜಾಬೇ ಸಿಡಿದು ಹೋಗುವಂತಿದ್ದ ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ದಿಟ್ಟ ನಿರ್ಧಾರ ತೆಗೆದುಕೊಂಡರು. ಇಲ್ಲಿ ಬಹುತೇಕ ಜನ ವ್ಯವಸ್ಥೆಯನ್ನ ಬೆಂಬಲಿಸುತ್ತಾರೆ. ಪ್ರತಿಭಟನಾಕಾರರನ್ನಾಗಲೀ ಪ್ರತ್ಯೇಕತಾವಾದಿಗಳನ್ನಾಗಲೀ ಅಲ್ಲ.
೨. ಜನರಲ್ ಡಯರ್ ಅಮೃತಸರದ ಬಳಿಯ ಜಲಿಯನ್ ವಾಲಾಬಾಗ್ ನಲ್ಲಿ ೧೯೧೯ರಲ್ಲಿ ಒಂದು enclosed area ನಲ್ಲಿ ಶಾಂತಿಯುತ ಸಭೆ ನಡೆಸುತ್ತಿದ್ದ ಜನರ ಗುಂಪಿನ ಮೇಲೆ ಏಕಾಏಕಿ ಗುಂಡಿನ ಧಾಳಿ ನಡೆಸಿದ. ಒಂದು ವ್ಯವಸ್ಥಿತ, ಅಮಾನವೀಯ, ಬರ್ಬರ ಧಾಳಿ ನಡೆಸಿ ಜನರ ಸಾವು ನೋವಿಗೆ ಕಾರಣನಾದ. ಇದು ವ್ಯವಸ್ಥೆ ನಡೆಸಿದ ಕೃತ್ಯ. ಇದನ್ನ ಯಾವ ಭಾರತೀಯನೂ ಬೆಂಬಲಿಸುವುದಿಲ್ಲ.

ಇನ್ನು ಟೈಮ್ಸ್ ನೌ ಜನರಿಗೆ ನೆನಪಿಸಿದ್ದು ಅಮಾನವೀಯತೆಯನ್ನಲ್ಲ. System ಒಂದು ತುರ್ತು ಅಗತ್ಯಕ್ಕೆ ಕೈಗೊಂಡ ಕ್ರಮವನ್ನ ಮಾಧ್ಯಮವೊಂದು ಸಮರ್ಥಿಸುವಂತಿತ್ತು.

ಇದೆಲ್ಲಾ ಆಯ್ತು ಸರಿ. ಜನರೆಲ್ಲಾ ಜನರಲ್ ಡಯರನನ್ನ, ಜಲಿಯನ್ ವಾಲಾಬಾಗ್ ನ ನೆನಪಿಸಿಕೊಂಡರೆ, ಮಾಧ್ಯಮಗಳಿಗೆ ಬ್ಲೂ ಸ್ಟಾರ್ ಆಪರೇಶನ್ ನೆನಪಾದದ್ದು ದುರಂತ.

ಮುಂದೇನು?
೧. ರಾಮದೇವ್ ಬಾಬಾ ಹೋರಾಟವನ್ನ ಇನ್ನೂ ತೀವ್ರಗೊಳಿಸಬಹುದು.
೨. ರಾಮದೇವ್ ಬಾಬಾ ಮೇಲೆ ಇಲ್ಲ ಸಲ್ಲದ ಕೇಸುಗಳನ್ನ ಜಡಿದು ಒಂದೆಡೆ ಕೂಡಿಸಲಿಕ್ಕೆ, ಇಮೇಜ್ ಹಾಳು ಮಾಡಲಿಕ್ಕೆ, ತಾನು ಪ್ರತಿಪಾದಿಸಿದ “ಮೋಸಗಾರ” ಇಮೇಜಿಗೆ ಹೊಸ ಹೊಸ ಕಾರಣಗಳನ್ನ ಹುಡುಕಬಹುದು. ರಾಮದೇವ್ ಬಾಬಾನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಸರ್ವ ಪ್ರಯತ್ನಗಳನ್ನೂ ಮಾಡುತ್ತದೆ.
೩. ಬಾಬಾನ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಪ್ರತಿಯಾಗಿ ಇನ್ನೋಂದು ಆಂದೋಲನ ನಡೆಸಬಹುದು. ಆದರೆ, ಸಧ್ಯಕ್ಕೆ ಅಂಥಾ ಪ್ರಬಲ ಕಾರಣಗಳ್ಯಾವೂ ಪ್ರತಿ ಆಂದೋಲನಕ್ಕೆ ಕಾರಣಗಳಿಲ್ಲ. ಅಂಥದ್ದನ್ನ ಮಾಡಿದರೂ ಜನ ಚಪ್ಪಲಿ ಕೈಗೆತ್ತಿಕೊಳ್ತಾರೆ.
೪. ಇದರ ಜೊತೆ ಅಣ್ಣಾ ಹಜಾರೆ ಕೂಡಾ ಪ್ರತಿಭಟನೆ, ಸತ್ಯಾಗ್ರಹ ಶುರು ಮಾಡಿಕೊಂಡರೆ, ಅವರನ್ನ ಏನಾದ್ರೂ ಮಾಡಿ ತಡೆದು,  ಜನಲೋಕಪಾಲ್ ಬಿಲ್ ನ ಡ್ರಾಫ್ಟ್ ಕಾಪಿ ತನಗೆ ಬೇಕಾಗಿರುವಂತೆ ರೂಪಿಸಿಕೊಳ್ಳುತ್ತದೆ.
೫. ಇದೆಲ್ಲಾ ನಡೆಯುವಷ್ಟರ ಹೊತ್ತಿಗೆ ರಾಮದೇವ್ ಬಾಬಾನ ಹಣ ಕಪ್ಪು ಹಣದಿಂದಲೇ ಬಂದದ್ದು ಅನ್ನೋ ವಾದವನ್ನ ಮಂಡಿಸಲಿಕ್ಕೆ ಶುರು ಮಾಡುತ್ತದೆ. ಹಾಗಾಗಿ ಕಪ್ಪು ಹಣದ ವಿರುದ್ಧ ಹೋರಾಡಲಿಕ್ಕೆ ನೈತಿಕ ಹಕ್ಕಿಲ್ಲ ಅನ್ನುತ್ತದೆ.
೬. ರಾಮದೇವ ಬಾಬಾನನ್ನ ಯಾವುದಾದರೂ ಹಗರಣಗಳಲ್ಲಿ ಸಿಲುಕಿಸಲಿಕ್ಕೆ ಶತಾಯುಗತಾಯ ಪ್ರಯತ್ನ ನಡೆಸುತ್ತದೆ. ನಿತ್ಯಾನಂದನ ರಾಸಲೀಲೆ ಥರದವಾದರೆ, ಜನ ಮನರಂಜನೆ ಕೂಡಾ ಅನುಭವಿಸುತ್ತಾರೆ ಮತ್ತು ಕಪ್ಪು ಹಣ, ಭ್ರಷ್ಟಾಚಾರವನ್ನೂ ಮರೆತುಬಿಡುತ್ತಾರೆ.
೭. ಈಗ ವಿಶ್ವಾಸ ಕಳೆದುಕೊಂಡಿರುವುದು ಕೇಂದ್ರ ಸರಕಾರ. ಹಾಗಾಗಿ ಕೇಂದ್ರ ಸರಕಾರ ಏನೇ ಗಿಮಿಕ್ ಗಳನ್ನ ಮಾಡಲಿಕ್ಕೆ ಹೊರಟರೂ ಜನ ಅನುಮಾನದಿಂದ ನೋಡುತ್ತರೆ, ಜೊತೆಗೆ ರಾಮದೇವ ಬಾಬಾನ ಮೇಲಿನ ಅನುಕಂಪದ ಅಲೆ ಕೂಡಾ ಸಾಥ್ ಕೊಡುತ್ತದೆ.

ಭ್ರಷ್ಟಾಚಾರದ ವಿರುದ್ದ ಹೋರಾಟದಲ್ಲಿ ನಾವು ರಾಮದೇವ ಬಾಬಾನನ್ನ ಬೆಂಬಲಿಸುವ ಸಂದಿಗ್ಥತೆಯಲ್ಲಿದ್ದೇವೆ.

ಸಂಪಾದಕೀಯರವರು ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ.

ಸಂವಿಧಾನವನ್ನೇ ಒಪ್ಪದ ರಾಮದೇವ ಸತ್ಯಾಗ್ರಹಕ್ಕೆ ಇಳಿದಿದ್ದಾರೆ… ಜೈ ಹೋ!

ಇದಕ್ಕೆ ಇನ್ನೊಂದು ಮಜಲು ಇದೆ. ಅದನ್ನ ನೋಡುವ ಪ್ರಯತ್ನವಿದು.

ನಾವು ಪ್ರಜಾಪ್ರಭುತ್ವದ, ಪ್ರಜ್ಞಾವಂತಿಕೆಯ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ.

ರಾಮದೇವ ಬಾಬಾ ಕೂಡಾ ಸಾಯಿಬಾಬಾನಂತೆ ಹೈಪ್‍ಗಳನ್ನೇ ಸೃಷ್ಟಿ ಮಾಡಿ ಜನರನ್ನ ಮರಳು ಮಾಡುತ್ತಿರುವುದು. ರೊಕ್ಕ ಮಾಡುತ್ತಿರುವುದು.

ಆದರೆ, ಒಂದು ಪ್ರಬಲವಾದ ಅನುಮಾನವೂ ಕಾಡುತ್ತದೆ. ನಮ್ಮ ಜನ ಹಂಗೇ ಕೇಳಿದರೆ ರೊಕ್ಕ ಬಿಚ್ಚಲ್ಲ, ರೊಕ್ಕ ಬಿಚ್ಚುವುದಿರಲಿ ತಿರುಗಿ ಮೂಸಿ ನೋಡುವುದೂ ಇಲ್ಲ. ದೈವತ್ವ ಅನ್ನೋದು ಅಷ್ಟರ ಮಟ್ಟಿಗೆ ನಮ್ಮ ದೇಶವನ್ನ ಆವರಿಸಿಬಿಟ್ಟಿದೆ. ದೇವಮಾನವ ಬೂದಿಕೊಡ್ತಾನೆ, ಕ್ಯಾನ್ಸರ್ ವಾಸಿಮಾಡ್ತಾನೆ, ಕಂಡ ಕಂಡ ರೋಗಗಳನ್ನ ವಾಸಿಮಾಡ್ತಾನೆ ಅಂತಾ ಪ್ರಚಾರ ಸಿಕ್ಬಿಟ್ರೆ ಸಾಕು ಜನ ಮುಗಿ ಬೀಳ್ತಾರೆ. ಅದಕ್ಕೆ ವಿದ್ಯಾವಂತರೂ ಬೆಂಬಲಿಸವುದು ವಿಪರ್ಯಾಸ ಮತ್ತು ದುರಂತ.

ಈ ರಾಮದೇವ ಬಾಬಾಗಳು, ಸಾಯಿಬಾಬಾಗಳು ಎಲೆಕ್ಷನ್‍ಗೆ ನಿಂತು ಆಡಳಿತ ಮಾಡಿದ್ರೆ, ಇವರೂ ಏನೂ ಸುಧಾರಣೆ ಮಾಡಕ್ ಆಗ್ತಾ ಇರ್ತಿರ್ಲಿಲ್ಲ. ಪ್ರತೀಸಲವೂ “ಅತಿ ಆಶಾವಾದ”ವು ಆಶಾಭಂಗದಲ್ಲೇ ಕೊನೆಗೊಳ್ಳುತ್ತದೆ. ಸರಿಯಾಗಿ ೩ ವರ್ಷಗಳ ಹಿಂದೆ ಯಡ್ಯೂರಪ್ಪನನ್ನ ಜನ ಸುಧಾರಣೆಯ ಹರಿಕಾರ, ಹೊಸತನವನ್ನ ತರಬಲ್ಲಾತ ಅಂತಲೇ ಬಲವಾಗಿ ನಂಬಿದ್ದರು. ಆ ನಂಬಿಕೆಗಳೆಲ್ಲವೂ ಠುಸ್ ಆಗಿವೆ. ಆಶಾವಾದವು ಅತಿಯಾದಾಗ ನಿರಾಸೆ ಮೂಡಿಸುತ್ತದೆ. ಅದು ಪ್ರಜಾಪ್ರಭುತ್ವದ ಮಟ್ಟಿಗೆ ನೂರಕ್ಕೆ ನೂರು ಸತ್ಯ. ಈಗ ರಾಮದೇವ ಬಾಬಾ ಸತ್ಯಾಗ್ರಹ ಮಾಡಿ, ಕಪ್ಪು ಹಣ ತರ್ತಾರೋ ಬಿಡ್ತಾರೋ ಬಿಡಿ. ಆದ್ರೆ, ಪೊಲಿಟಿಕಲಿ ಇನ್ನೂ ಸ್ಟ್ರಾಂಗ್ ಆಗ್ತಾರೆ. ಅವರ ಮಾತನ್ನ ತೆಗೆದು ಹಾಕುವುದು ಸುಲಭವಾಗುವುದಿಲ್ಲ. ಇದೇ ಜನಪ್ರಿಯತೆಯನ್ನ ಬಳಸಿಕೊಂಡು ಅವರು ರಾಜಕೀಯ ಪಕ್ಷವನ್ನ ಸ್ಥಾಪಿಸಬಹುದಾದ ಸಕಲ ಸಾಧ್ಯತೆಗಳೂ ಇವೆ. ಆದ್ರೆ, ನಮ್ಮ ಯಡ್ಯೂರಪ್ಪನ ಮೇಲೆ ನಾವು ಆಸೆ, ವಿಶ್ವಾಸಗಳನ್ನ ಇಟ್ಟುಕೊಂಡದ್ದು ಠುಸ್ ಆದಂತೆ ಬಾಬಾ ವಿಷಯದಲ್ಲೂ ಆಗುತ್ತದೆ ಎಂಬುದು ರಾಜಕೀಯ ಲೆಕ್ಕಾಚಾರ ಹಾಕಿದವರಿಗೆ ಮಾತ್ರ ಗೊತ್ತಾಗುತ್ತದೆ.

ಆದರೆ, ಇಲ್ಲಿ ಪ್ರಶ್ನೆ ಇರೋದು ಬಾಬಾನನ್ನ ಬೆಂಬಲಿಸಬೇಕೋ ಅಥವಾ ಬೇಡವೋ ಅನ್ನೋದು. ರಾಜಕೀಯೇತರ ವ್ಯಕ್ತಿಯೊಬ್ಬ ಸರ್ಕಾರದ ಜುಟ್ಟು ಹಿಡ್ಕಂಡು ಅಲ್ಲಾಡಿಸುವ ತಾಕತ್ತಿರುವುದು ಬಾಬಾನಂಥವರಿಗೆ ಮಾತ್ರ ಅನ್ನೋದು ವೈರುಧ್ಯವೂ ಹೌದು ವಿಪರ್ಯಾಸವೂ ಹೌದು. ಆದರೆ, ಸಧ್ಯದ ಭ್ರಷ್ಟಾಚಾರದ ವಿರುದ್ದ ಹೋರಾಟದಲ್ಲಿ ನಾವು ರಾಜಕೀಯೇತರ ವ್ಯಕ್ತಿಯೊಬ್ಬನನ್ನ ಬೆಂಬಲಿಸುವ ಸಂದಿಗ್ಥತೆಯಲ್ಲಿದ್ದೇವೆ. ಹಾಗಾಗಿ ನಾನು ರಾಮದೇವ ಬಾಬಾನನ್ನ ಬೆಂಬಲಿಸುತ್ತೇನೆ.

ಗಣೇಶ್ ಕೆ

This man requires a politician’s daughter for his son..!

“Wanted politicians daughters ”

Hello sir ;
My name subburaman iam retired TNEB inspector , my elder son name is ganesh he is in london, i decide marriage to my son but only politicians daughters, i include my address and my son bio-data if you know any details pls send me sir..

Name – S.Ganesh Babu

Age – 27

Qualification – Msc(comp.sci)

Caste – Naidu

Religion – Hindu

Salary – 2lakhs

Address – 13, krishnapalayam 1st street,

Arappalayam cross road,

Madurai-625016

Tamilnadu

Mobile – 9443074618

E.mail – sjs_bca@yahoo.com

Article from
http://board.classifieds1000.com/India/Politics/e_mail_addresses_of_politicians